Wednesday, January 17, 2018

ಬಲರಾಮ & ಎಡರಾಮ

ಶಿಷ್ಯ: ಅಣ್ಣನಿಗೆ ಬಲರಾಮ ಅಂತ ಹೆಸರಿಟ್ಟು, ತಮ್ಮನಿಗೆ ಕೃಷ್ಣ ಅಂತೇಕೆ ಹೆಸರಿಟ್ಟರು?

ಗುರು: ಎಡರಾಮ ಅಂತಿಟ್ಟಿದ್ದರೆ ತುಂಬಾ ಎಡಬಿಡಂಗಿಯಾಗಿರುತ್ತಿತ್ತು!

**

ಮನುಷ್ಯ: ದೇವರೇ, ಹುಡುಗಿಯರು ಎಷ್ಟು ಚೆನ್ನಾಗಿರುತ್ತಾರೆ. ಆದರೆ ಹೆಂಡತಿಯರು ಮಾತ್ರ ಯಾಕೆ ಹೀಗೆ? ಸದಾ ಜೀವ ತಿನ್ನುತ್ತಾರೆ.

ದೇವರು: ಭಕ್ತ, ಕೇಳು. ಹುಡುಗಿ ನನ್ನ ಸೃಷ್ಟಿ. ಹೆಂಡತಿ ನಿನ್ನ ಸೃಷ್ಟಿ!

ವಿ. ಸೂ: ಹುಡುಗರು, ಗಂಡಂದಿರು ಅಂತ ಕೂಡ ಬದಲಾಯಿಸಿಕೊಳ್ಳಬಹುದು.

ಕೇವಲ ಜೋಕ್ ಎಂದು ಕಡೆಗಣಿಸದಿರಿ. ಇದರಲ್ಲಿ ಅದ್ವೈತದ ಪರಮ ಸತ್ಯ ಅಡಗಿದೆ. ಪರಮಸತ್ಯವಾದ ಬ್ರಹ್ಮನ (brahman) ಮೇಲೆ ಮಾಯೆಯ ಪರದೆ ಬೀಳುವದೇ ಎಲ್ಲ ದುಃಖಗಳಿಗೆ ಕಾರಣ. ಹುಡುಗಿ ಸತ್ಯ. ಅಂತಹ ಸತ್ಯದ ಮೇಲೆ ಹೆಂಡತಿ ಎಂಬ ಮಾಯೆಯನ್ನು via ನಾಮ ರೂಪದ ಮೂಲಕ ಕೊಟ್ಟುಕೊಳ್ಳುವದೇ ಸಕಲ ದುಃಖಗಳಿಗೆ ಕಾರಣ.

Superimposing unreality over the reality.

**

ಶಿಷ್ಯ: ಎಲ್ಲಾ ಬಿಟ್ಟು ಅರ್ಜುನನ ಜೊತೆ ಭೀಕರ, ಭಯಾನಕ ಯುದ್ಧಭೂಮಿಗೆ ಏಕೆ ಬಂದ ಕೃಷ್ಣ ಪರಮಾತ್ಮ?

ಗುರು: ಮನೆಯಲ್ಲಿ ೧೬,೦೦೦ ಹೆಂಡತಿಯರಿರುವ ಪುಣ್ಯಾತ್ಮ ಆ ಕೃಷ್ಣ ಪರಮಾತ್ಮ. ಅಂತಹ ಮನೆ ಹೇಗಿರಬಹುದು ಅಂತ ವಿಚಾರ ಮಾಡು. ಅದಕ್ಕೆ ಹೋಲಿಸಿದರೆ ಯುದ್ಧಭೂಮಿಯೇ ಎಷ್ಟೋ ಪಾಲು ಮೇಲು, ಎಷ್ಟೋ ಶಾಂತಿಯುತ ಅಂದುಕೊಂಡು ಯುದ್ಧಭೂಮಿಗೆ ಬಂದಿರಬಹುದು.

ಟಿಪ್ಪಣಿ: ನಿಜವಾಗಿ ವಿಚಾರ ಮಾಡಬೇಕಾದ ವಿಷಯ ಏನೆಂದರೆ - ಬ್ರಹ್ಮಚಾರಿ ಹನುಮಂತ ಯಾಕೆ ಯುದ್ಧಭೂಮಿಗೆ ಬಂದ??? ಭೀಮ ಸೌಗಂಧಿಕಾ ಪುಷ್ಪ ತರಲು ಹೋದಾಗ ಭೀಮನಿಗೆ ಆಶ್ವಾಸನೆ ಕೊಟ್ಟಿದ್ದ, 'ನಾನು ಬಂದು ಅರ್ಜುನನ ರಥದ ಮೇಲಿರುವ ಧ್ವಜದಲ್ಲಿ ಸ್ಥಾಪಿತನಾಗುತ್ತೇನೆ. ಹುರಿದುಂಬಿಸುತ್ತೇನೆ.' ಅದರ ಪ್ರಕಾರ ಭಿಡೆಗೆ ಕಟ್ಟುಬಿದ್ದು ಬಂದಿದ್ದನೋ ಹೇಗೆ? ಅಥವಾ ಸಂಸಾರಿಗಳು ಹೇಗೆ ಹೊಡೆದಾಡಿಕೊಂಡು ಎಲ್ಲರೂ ನಾಶವಾಗುತ್ತಾರೆ ಎಂಬುದನ್ನು ನೋಡಲು ಬಂದಿದ್ದನೋ? :)

**

ಗಂಡನನ್ನು 'ಈ ಕಾರಣ'ಕ್ಕಾಗಿ ಸದಾ ಬಯ್ಯುವವರು ಈ ಲೇಖನ ಓದಿಬಿಡಿ. ನಾ ಮಾತ್ರ ಅದರ ಬಗ್ಗೆ ಬರೆಯಲಾರೆ! ಸಿವಾsss! ಇನ್ನೂ ಏನೇನು ಸಂಶೋಧನೆಗಳು ಬರಲಿವೆಯೋ!

2 comments:

sunaath said...

ಕಣ್ಣು ತೆರೆಯಿಸುವ ಸತ್ಯಗಳು, ಮಹೇಶ. ದೈನಂದಿನ ಬದುಕಿನಲ್ಲಿ, ಈ ಸತ್ಯಗಳು ನಮಗೆ ಸುರಕ್ಷಾಕವಚಗಳನ್ನು ನೀಡುವುದರಲ್ಲಿ ಸಂಶಯವಿಲ್ಲ.ಇನ್ನು ನೀವು RDಯಿಂದ ಕೋಟ್ ಮಾಡಿದ ವಿಶೇಷ ಲೇಖನದ ಬಗೆಗೆ: ಹೈಡ್ರೋಜೆನ್ ಸಲ್ಫೈಡ್ ಇಷ್ಟೊಂದು ‘powerful' medicine ಆಗಿರುವಾಗ ಈಗಾಗಲೇ ಯಾರೂ ಅದರ productionಅನ್ನು ಪೇಟೆಂಟ್ ಮಾಡಿರಬಹುದೆ, ಹೇಗೆ?

Mahesh Hegade said...

ಬಾಸುಮತಿ ಅಕ್ಕಿಯನ್ನೇ ಪೇಟೆಂಟ್ ಮಾಡಿದ್ದಾರೆ ಅಂದ ಮೇಲೆ ಯಕಶ್ಚಿತ ಹೂ_ಮತಿ ಪತಿಯನ್ನೂ ಪೇಟೆಂಟ್ ಮಾಡಿಬಿಟ್ಟಾರು! :)

ಕಾಮೆಂಟಿಗೆ ಧನ್ಯವಾದ, ಸರ್.