Tuesday, October 31, 2017

ಯಾವಾಗ ಸುಳ್ಳು ಹೇಳಬಹುದು?

ಕೆಳಗಿನ ಐದು ಸಂದರ್ಭಗಳಲ್ಲಿ ಸುಳ್ಳು ಹೇಳಬಹುದಂತೆ.

೧. ಪುರುಷ ಮತ್ತು ಮಹಿಳೆ ಮಿಲನಸುಖ ಅನುಭವಿಸುತ್ತಿರುವಾಗ ಪುರುಷನು ಸುಳ್ಳುಗಳನ್ನು ಹೇಳಬಹುದು. ಅವುಗಳನ್ನು ಹಾಸ್ಯೋಕ್ತಿ (Jokes) ಎಂದು ಪರಿಗಣಿಸಲಾಗುತ್ತದೆ.
೨. ಮಹಿಳೆಯನ್ನು ಗೆಲ್ಲಲು (ಪಟಾಯಿಸಲು) ಸುಳ್ಳುಗಳನ್ನು ಹೇಳಬಹುದು.
೩. ಮದುವೆ ಮಾಡಿಸಲು ಸುಳ್ಳು ಹೇಳಬಹುದು ('ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು,' ಎಂಬುದು ಇಲ್ಲಿಂದಲೇ ಬಂತೋ ಹೇಗೆ!?)
೪. ಪ್ರಾಣಾಪಾಯವಿರುವಾಗ ಪ್ರಾಣ ಉಳಿಯುತ್ತದೆ ಎಂದಾದರೆ ಸುಳ್ಳು ಹೇಳಬಹುದು.
೫. ಸಕಲ ಸಂಪತ್ತು ನಾಶವಾಗಲಿದೆ, ಕಳೆದುಹೋಗಲಿದೆ ಎಂದಾದಾಗ ಸುಳ್ಳು ಹೇಳಬಹುದು.

ಲೋಕದ ಜನ ಈ ಸಂದರ್ಭಗಳಲ್ಲೇ ಅಲ್ಲವೇ ಗರಿಷ್ಠ (ಮ್ಯಾಕ್ಸಿಮಮ್) ಸುಳ್ಳುಗಳನ್ನು ಹೇಳುವದು? ಮತ್ತು ಇದೇ ಸಂದರ್ಭಗಳಲ್ಲಿ ಜನ ಸುಳ್ಳುಗಳನ್ನು ನಂಬುತ್ತಾರೆ ಕೂಡ.

ಇದು ಭಾಗವತ ಪುರಾಣದಲ್ಲಿ (ಶ್ರೀಮದ್ಭಾಗವತದಲ್ಲಿ) ಬರುತ್ತದೆ.

ಸಂದರ್ಭದೊಡನೆ ಸ್ಪಷ್ಟೀಕರಣ: ಅಸುರ ರಾಜಕುಮಾರಿ ಶರ್ಮಿಷ್ಠಾ ಮಹಾರಾಜಾ ಯಯಾತಿಯಲ್ಲಿ ಮೋಹಗೊಳ್ಳುತ್ತಾಳೆ. ಯಯಾತಿ ಆಗಲೇ ವಿವಾಹಿತ. ಆದರೆ ಶರ್ಮಿಷ್ಠಾ ಸಿಕ್ಕಾಪಟ್ಟೆ ಸುಂದರಿ. ಅವನೂ ಆಕೆಯಲ್ಲಿ ಮೋಹಗೊಳ್ಳುತ್ತಾನೆ. ಆದರೆ ದೇವಯಾನಿಯನ್ನು ಮದುವೆಯಾಗಿರುತ್ತಾನಲ್ಲ. ಈ ದೇವಯಾನಿ ಶರ್ಮಿಷ್ಠಾಳ ಗೆಳತಿ. ದೈತ್ಯಗುರು ಶುಕ್ರಾಚಾರ್ಯರ ಮಗಳು. ಹಾಗಿರುವಾಗ ದೇವಯಾನಿಗೆ ಏನೆಂದು ಹೇಳಿ ಹೇಗೆ ಶರ್ಮಿಷ್ಠಾಳನ್ನು ಮದುವೆಯಾದಾನು ಯಯಾತಿ?

ಯಯಾತಿ ತನ್ನ ಸಂಕಷ್ಟವನ್ನು ಹೇಳಿಕೊಂಡಾಗ ಶರ್ಮಿಷ್ಠಾ ಹೇಳುತ್ತಾಳೆ, 'ಸುಳ್ಳು ಹೇಳಯ್ಯಾ!'

'ಹೇಗೆ ಸುಳ್ಳು ಹೇಳಲಿ? ಸುಳ್ಳು ಹೇಳುವದು ತಪ್ಪಲ್ಲವೇ?' ಎಂದು ಕೇಳುತ್ತಾನೆ ಯಯಾತಿ.

'ಎಲ್ಲ ಶಾಸ್ತ್ರಗಳನ್ನು ಓದಿರುವ ನಿನಗೆ ಗೊತ್ತಿಲ್ಲದೇನಿದೆ? ಐದು ಸಂದರ್ಭಗಳಲ್ಲಿ ಸುಳ್ಳು ಹೇಳಬಹುದು ಎಂದು ಶಾಸ್ತ್ರಗಳಲ್ಲೇ ಹೇಳಿದ್ದಾರಲ್ಲ?' ಎನ್ನುತ್ತಾಳೆ ಶರ್ಮಿಷ್ಠಾ.

ಯಾಯಾತಿಗಂತೂ ಯಾವ ಶಾಸ್ತ್ರಗಳಲ್ಲಿ ಸುಳ್ಳು ಹೇಳುವ ಅನುಮತಿ ಇದೆ ಎಂದು ನೆನಪಾಗುವದಿಲ್ಲ.

ಆಗ ಶರ್ಮಿಷ್ಠಾ ಮೇಲಿನ ಐದು ಸಂದರ್ಭಗಳಲ್ಲಿ ಸುಳ್ಳು ಹೇಳಬಹುದು ಎನ್ನುತ್ತಾಳೆ.

ಅಲ್ಲಿಗೆ ದೇವಯಾನಿಗೆ ಸವತಿ ಬರುವ ಸ್ಕೆಚ್ ತಯಾರಾಗುತ್ತದೆ.

ಆದರೆ ಸುಳ್ಳು ಹೇಳಲು ಸಮ್ಮತಿ ಯಾವ ಶಾಸ್ತ್ರದಲ್ಲಿ ಇದೆ ಎಂದು ಯಯಾತಿಯೂ ಕೇಳಿರಲಿಕ್ಕಿಲ್ಲ ಶರ್ಮಿಷ್ಠಾಳೂ ಹೇಳಿರಲಿಕ್ಕಿಲ್ಲ. ಅಲ್ಲವೇ!? ಆತುರವಾದಾಗ ರೆಫರೆನ್ಸ್ ಕೇಳುವ ಕೊಡುವ ವ್ಯವಧಾನ ಯಾರಿಗಿರುತ್ತದೆ? :)

ಭಾಗವತದಲ್ಲೇ ಬರಲಿ ಅಥವಾ ಬೇರೆ ಎಲ್ಲಾದರೂ ಬರಲಿ, ಆದಷ್ಟು ಸತ್ಯವನ್ನೇ ಹೇಳೋಣ. ಜಾಸ್ತಿ ತಲೆಬಿಸಿಯಿಲ್ಲ. ಆಕಸ್ಮಾತ್ ಸುಳ್ಳು ಹೇಳಿದ್ದರೆ ಮೇಲಿನ ಸಂದರ್ಭಗಳಲ್ಲಿ ಹೇಳಿದ್ದೀರೋ ನೋಡಿಕೊಳ್ಳಿ. ಮೇಲಿನ ಐದು ಸಂದರ್ಭಗಳಲ್ಲಿ ಬಾರಾ ಖೂನ್ ಮಾಫ್. ಬೇರೆ ಯಾವದಾದರೂ ಸಂದರ್ಭಗಳಲ್ಲಿ ಹೇಳಿದರೆ ಪ್ರಾಯಶ್ಚಿತ ಮಾಡಿಕೊಳ್ಳಬೇಕೇನೋ.  ಅದಕ್ಕೂ ಶಾಸ್ತ್ರದಲ್ಲಿ ಎಲ್ಲೋ ರೆಫರೆನ್ಸ್ ಸಿಗುತ್ತದೆ ಬಿಡಿ. :)

ಸತ್ಯಮೇವ ಜಯತೆ. ಲಲ್ಲು ಸಾಹೇಬರು ಮೇವು ತಿಂದದ್ದು ನೋಡಿದ್ದಾಗ ಅದು 'ಸತ್ಯ ಮೇವು ಜಗಿತೇ!' ಎನ್ನಿಸಿತ್ತು. ಸತ್ಯವಾಗಿ ದನದ ಮೇವು ಜಗಿದು ತಿಂದು ಅರಗಿಸಿಕೊಂಡ ಭೂಪ ಅವರಲ್ಲವೇ! :)

ಮಾಹಿತಿ ಆಧಾರ: Srimad Bhagavatam by Kamala Subramaniam

Sunday, October 22, 2017

ಸ್ವಪ್ನಸಿಂಹ

ಅದ್ವೈತ ವೇದಾಂತದ ಸಾರವನ್ನು, ತಿರುಳನ್ನು ಒಂದೇ ವಾಕ್ಯದಲ್ಲಿ ಹೇಳಬೇಕು ಅಂದರೆ ಹೀಗೆ ಹೇಳಬಹುದು - 'ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವನಾಪರಃ' ಅರ್ಥಾತ್  'ಬ್ರಹ್ಮ (ಪರಬ್ರಹ್ಮ) ಸತ್ಯ. ಜಗತ್ತೆಂಬುದು ಮಿಥ್ಯೆ. ಜೀವವು ಬ್ರಹ್ಮನೇ ಹೊರತು ಬೇರೆಯಲ್ಲ.'

ಇದು ಶ್ರೀ ಆದಿ ಶಂಕರಾಚಾರ್ಯ ವಿರಚಿತ 'ವಿವೇಕ ಚೂಡಾಮಣಿ' ಎಂಬ ಗ್ರಂಥದಲ್ಲಿ ಬರುವ ಒಂದು ಶ್ಲೋಕ ಅಥವಾ ಶ್ಲೋಕದ ಭಾಗ. ಇದೇ ಅದ್ವೈತ ವೇದಾಂತದ ತಿರುಳು (Essence, Gist, Crux).

ಬ್ರಹ್ಮ ಸತ್ಯ. ಜಗತ್ತು ಮಿಥ್ಯೆ.

ಇದನ್ನು ಕೇಳಿದಾಗ ಜಿಜ್ಞಾಸುಗಳಲ್ಲಿ ಒಂದು ಪ್ರಶ್ನೆ ಉದ್ಭವಿಸಬಹುದು. ಅದ್ವೈತ ವೇದಾಂತ ಸಹ ಸತ್ಯವನ್ನು ಅರಿಯಲು ಉಪಯೋಗಿಸುವದು ಪ್ರಸ್ಥಾನತ್ರಯವೇ. ಪ್ರಸ್ಥಾನತ್ರಯ ಅಂದರೆ ಉಪನಿಷತ್ತುಗಳು, ಭಗವದ್ಗೀತೆ ಮತ್ತು ಬ್ರಹ್ಮಸೂತ್ರ. ವೇದಾಂತ ನಿಂತಿರುವದೇ ಇವುಗಳ ಬುನಾದಿಯ ಮೇಲೆ.

ಉಪನಿಷತ್ತುಗಳು, ಭಗವದ್ಗೀತೆ ಮತ್ತು ಬ್ರಹ್ಮಸೂತ್ರ ಇವೆಲ್ಲ ಇದೇ ಜಗತ್ತಿನಲ್ಲಿ ಇವೆ. ಜಗತ್ತು ಮಿಥ್ಯೆ ಎಂದಾಗಿದೆ. ಜಗತ್ತೇ ಮಿಥ್ಯೆ ಎಂದು ಒಪ್ಪಿಕೊಂಡ ಮೇಲೆ ಜಗತ್ತಿನಲ್ಲಿರುವ ಎಲ್ಲವೂ ಮಿಥ್ಯೆ ತಾನೇ? ಹಾಗಾದರೆ ಉಪನಿಷತ್ತುಗಳು, ಭಗವದ್ಗೀತೆ ಮತ್ತು ಬ್ರಹ್ಮಸೂತ್ರ ಕೂಡ ಮಿಥ್ಯೆ. ಹಾಗಾಗಿ ಇಂತಹ ಮಿಥ್ಯೆಗಳ ಆಧಾರದ ಮೇಲೆ ನಿಂತಿರುವ ಅದ್ವೈತ ವೇದಾಂತ ಕೂಡ ಮಿಥ್ಯೆ. ಇಂತಹ ಮಿಥ್ಯೆಯ ಮೂಟೆ ಸತ್ಯವನ್ನು ಹೇಗೆ ತೋರಿಸೀತು? ಒಂದು ವೇಳೆ ತೋರಿಸುತ್ತದೆ ಅಂತಾದರೂ ಅದು ಸತ್ಯವಾಗಿರುತ್ತದೆಯೇ?

ಇಂತಹ ಮೂಲಭೂತ ಸಂಶಯ ಯಾರಿಗೂ ಬರಬಹುದು. ಈ ಸಂಶಯವನ್ನು ನಿವಾರಿಸಲು ವೇದಾಂತಿಗಳು ಒಂದು ದೃಷ್ಟಾಂತವನ್ನು ಉಪಯೋಗಿಸುತ್ತಾರೆ. 'ಸ್ವಪ್ನಸಿಂಹ' ಅಂತ ಆ ದೃಷ್ಟಾಂತದ ಹೆಸರು.

ಮಂಚದ ಮೇಲೆ ಮಲಗಿದ್ದೀರಿ. ಚೆನ್ನಾಗಿ ನಿದ್ದೆ ಬಂದಿದೆ. ಒಂದು ಕನಸು ಬೀಳುತ್ತದೆ. ಕನಸಿನಲ್ಲಿ ನೀವು ಕಾಡಿನಲ್ಲಿ ನಡೆದು ಹೋಗುತ್ತಿದ್ದೀರಿ. ಸುಂದರವಾದ ಕಾಡು. ರಮಣೀಯ ದೃಶ್ಯಗಳು. ಜುಳುಜುಳು ಹರಿಯುವ ನದಿ. ಅದರಲ್ಲಿ ತೇಲುತ್ತಿರುವ ಸುಂದರ ಹಂಸಗಳು. ಒಂದಕ್ಕಿಂತ ಒಂದು ಸುಂದರ. ಇಂತಹ ಕನಸನ್ನು ತುಂಬಾ ಸಂತಸದಿಂದ ಆಸ್ವಾದಿಸುತ್ತಿದ್ದೀರಿ.

ಆಗ ಒಮ್ಮೆಲೇ ಸಿಂಹಗರ್ಜನೆ ಕೇಳಿಬರುತ್ತದೆ. 'ಎಲ್ಲಿಂದ ಬಂತಪ್ಪಾ ಇದು?' ಎಂದು ಭಯದಿಂದ ಅತ್ತಿತ್ತ ನೋಡುವಷ್ಟರಲ್ಲಿ ದೈತ್ಯ ಭೀಕರ ಸಿಂಹವೊಂದು ನಿಮ್ಮೆದುರು ಪ್ರತ್ಯಕ್ಷವಾಗಿರುತ್ತದೆ. ಇನ್ನೇನು ಆ ಕ್ರೂರ ಸಿಂಹ ನಿಮ್ಮ ಮೇಲೆ ದಾಳಿ ಮಾಡಬೇಕು ಅನ್ನುವಷ್ಟರಲ್ಲಿ ಕನಸು ಮುರಿದುಬೀಳುತ್ತದೆ. ನಿದ್ದೆ ಮುಗಿಯುತ್ತದೆ. ಒಮ್ಮೆಲೇ ಎಚ್ಚರವಾಗುತ್ತದೆ. ಬೆಚ್ಚಿಬಿದ್ದು ಎದ್ದು ಕೂಡುತ್ತೀರಿ. ಕನಸು ಎಂದು ಅರಿವಾದರೂ ಭೀತಿ ಹೋಗಿರುವದಿಲ್ಲ. ಮೈ ಇನ್ನೂ ನಡುಗುತ್ತಿರುತ್ತದೆ. ಉಸಿರಾಟ ಯದ್ವಾತದ್ವಾ ಆಗಿರುತ್ತದೆ. ಕೊಂಚ ಸಮಯದ ನಂತರ ಎಲ್ಲ ಸಹಜಸ್ಥಿತಿಗೆ ಬರುತ್ತದೆ. ಆದರೆ ಒಂದು ಮಾತು ನಿಜ. ಒಮ್ಮೆ ಅಂತಹ ಭೀಕರ ಕನಸು ನೋಡಿ ಎದ್ದ ಮೇಲೆ ಅಷ್ಟು ಸುಲಭಕ್ಕೆ ನಿದ್ದೆ ಬರುವದಿಲ್ಲ.

ಕನಸಿನಲ್ಲಿ ಬಂದಿತ್ತು ಸಿಂಹ. ಅದು ಮಿಥ್ಯೆ. ಮಿಥ್ಯೆ ಎಂದರೆ ಸುಳ್ಳು ಅಂತ ಅರ್ಥವಲ್ಲ. ಸಂಪೂರ್ಣವಾಗಿ ಸತ್ಯ ಅಲ್ಲ ಅಷ್ಟೇ. ಕನಸಿನಲ್ಲಿ ಬಂದ ಸಿಂಹ ಕನಸು ಹಟಾತ್ತಾಗಿ ಮುರಿದು ಬೀಳುವ ತನಕ ನಿಜವೇ ಆಗಿತ್ತು. ನಿಮಗೆ ತುಂಬಾ ಹೆದರಿಕೆ ಆಗಿತ್ತು. ಅಲ್ಲಿಗೆ ಜೀವನ ಮುಗಿಯಿತು. ಸಿಂಹ ಕೊಂದು ತಿಂದು ಮುಗಿಸುತ್ತದೆ ಅಂತ ಭೀತಿಯಾಗಿತ್ತು. ಕನಸಿನಲ್ಲಿ ಬಂದ ಸಿಂಹದಿಂದ ಏನು ಪ್ರಯೋಜನವಾಯಿತೋ ಇಲ್ಲವೋ ಗೊತ್ತಿಲ್ಲ. ಕನಸು ಮುಗಿದು ಎಚ್ಚರವಂತೂ ಆಯಿತು. ಇಲ್ಲವಾದರೆ ಬಿದ್ದಿದ್ದ ಕನಸಿನಲ್ಲಿ ಸುಂದರ ಕಾಡಿನ ರಮಣೀಯ ದೃಶ್ಯಗಳನ್ನು ಸವಿಯುತ್ತ ಇನ್ನೂ ಅದೆಷ್ಟು ಗಂಟೆಗಳ ಕಾಲ ನಿದ್ರೆ ಮಾಡಿಕೊಂಡು ಇರುತ್ತಿದ್ದಿರೋ ಏನೋ.

ಉಪನಿಷತ್ತು, ಭಗವದ್ಗೀತೆ, ಬ್ರಹ್ಮಸೂತ್ರ ಮತ್ತು ಇನ್ನಿತರ ವೇದಾಂತದ ಗ್ರಂಥಗಳು, ಜ್ಞಾನದ ಮೂಲಗಳು ಕನಸಿನಲ್ಲಿ ಬಂದ ಸಿಂಹಗಳಿದ್ದಂತೆ. ಸ್ವಪ್ನಸಿಂಹಗಳು. ಮಿಥ್ಯೆ ನಿಜ. ಆದರೆ ನಿದ್ದೆಯಿಂದ ಬಡಿದೆಬ್ಬಿಸಲು ಮಾತ್ರ ತುಂಬಾ ಸಹಾಯಕಾರಿ. Very effective. Practically useful.

ನಮ್ಮ ಜಾಗ್ರತಾವಸ್ಥೆ ಕೂಡ ಸ್ವಪ್ನಾವಸ್ಥೆಯೇ. ಎಚ್ಚರವಿದ್ದಾಗ ಕಾಣುವದೂ ಕೂಡ ಕನಸೇ. ಹಾಗಾಗಿಯೇ ಜಗತ್ತು ಮಿಥ್ಯೆ. ಕೇವಲ ಹನ್ನೆರೆಡು ಮಂತ್ರಗಳಿರುವ ಮಾಂಡೂಕ್ಯ ಉಪನಿಷತ್ತು ಮತ್ತು ಅದರ ಮೇಲೆ ಆದಿ ಶಂಕರರ ಗುರುವಿನ ಗುರುಗಳಾದ ಗೌಡಪಾದಾಚಾರ್ಯರು ಬರೆದ ಕಾರಿಕ (commentary) ಈ ವಿಷಯವನ್ನು ಮನದಟ್ಟು ಮಾಡಿಕೊಡುತ್ತವೆ.

ನಾವು ಕಣ್ಣು ಬಿಟ್ಟುಕೊಂಡು ಕುಳಿತಾಗ ಇರುವ ಸ್ಥಿತಿ ಜಾಗ್ರತಾವಸ್ಥೆ. ಉಳಿದ ಎರಡು ಸ್ಥಿತಿಗಳು ಅಂದರೆ ಸ್ವಪ್ನಾವಸ್ಥೆ ಮತ್ತು ಸುಷುಪ್ತಿ (ಗಾಢ ನಿದ್ದೆ).

ಜಾಗ್ರತಾವಸ್ಥೆ ಕೂಡ ಒಂದು ತರಹದ ಸ್ವಪ್ನಾವಸ್ಥೆಯೇ. ಮಲಗಿ ಕನಸನ್ನು ಕಾಣುತ್ತಿರುವಾಗ ಆ ಕನಸು ಹೇಗೆ ೧೦೦% ನೈಜವಾಗಿರುತ್ತದೋ ಹಾಗೆಯೇ ಎಚ್ಚರವಾಗಿರುವಾಗ ಈ ಜಗತ್ತೆಂಬ (ಸಂಸಾರವೆಂಬ) ಕನಸು ಕೂಡ ೧೦೦% ನಿಜ ಅಂತ ಅನ್ನಿಸುತ್ತದೆ. ಹೀಗಿರುವಾಗ ಎಂದೋ ಒಂದು ದಿನ ಭಗವಂತನ ಕೃಪೆಯಾಗಿ ಯಾವುದೋ ಉಪನಿಷತ್ತನ್ನೋ, ಭಗವದ್ಗೀತೆಯನ್ನೋ ಅಥವಾ ಮತ್ತ್ಯಾವುದೋ ಅಮೋಘ ಗ್ರಂಥವನ್ನು ಕೈಗೆತ್ತಿಕೊಳ್ಳುತ್ತೇವೆ. ಅದರಲ್ಲಿರುವ ಅಮೂಲ್ಯ ಜ್ಞಾನ ಸ್ವಪ್ನಸಿಂಹದಂತೆ ಮೇಲೆರಗಿ ಬರುತ್ತದೆ. ಈ ಜಗತ್ತು, ಜೀವನ, ಸಂಸಾರ ಎಂಬ ಸುಂದರ ಕನಸು ಭಗ್ನಗೊಳ್ಳುತ್ತದೆ. ಅಷ್ಟರಮಟ್ಟಿಗೆ ಆ ಗ್ರಂಥಗಳು ಮತ್ತು ಅವುಗಳಲ್ಲಿರುವ ಜ್ಞಾನಶಕ್ತಿ ಕೆಲಸ ಮಾಡಿರುತ್ತದೆ. ಅಜ್ಞಾನದಿಂದ ತಾತ್ಕಾಲಿಕವಾಗಿ ಬಡಿದೆಬ್ಬಿಸಿರುತ್ತವೆ. ಆದರೆ ಆದಿಯಿಲ್ಲದ ಈ ಅಜ್ಞಾನ (ಮಾಯೆ) ಅದೆಷ್ಟು ದಟ್ಟವಾಗಿರುತ್ತದೆ ಅಂದರೆ ಮತ್ತೆ ನಿದ್ರೆಗೆ ಜಾರುತ್ತೇವೆ. ಮತ್ತೆ ಸಂಸಾರದ ಕನಸನ್ನು ರಸವತ್ತಾಗಿ ಆಸ್ವಾದಿಸುತ್ತ ಜೀವನವನ್ನು ಅಪವ್ಯಯ ಮಾಡುತ್ತೇವೆ. ಭಗವಂತನ ಕೃಪೆ ಇದ್ದರೆ ಮತ್ತೆ ಮತ್ತೆ ಈ ಸಂಸಾರವೆಂಬ ಕನಸಿನಲ್ಲಿ ಜ್ಞಾನವೆಂಬ ಸ್ವಪ್ನಸಿಂಹವನ್ನು ಕಂಡು ಬೆಚ್ಚಿಬಿದ್ದು ಎದ್ದು ಕೂಡುತ್ತವೆ. ಈ ಸಂಸಾರವೆಂಬ ಆದಿಯಿಲ್ಲದ ಅಜ್ಞಾನದ ಗಾಢ ಸ್ವಪ್ನವನ್ನು ಆಗಾಗ ತಾತ್ಕಾಲಿಕವಾಗಿಯಾದರೂ ಭಂಗಗೊಳಿಸಲು ಸ್ವಪ್ನಸಿಂಹ ಬೇರೆ ಬೇರೆ ರೂಪದಲ್ಲಿ ಬರಬಹುದು. ಗುರುವಿನ ರೂಪದಲ್ಲಿ ಬರಬಹುದು. ಅಧ್ಯಯನದ ರೂಪದಲ್ಲಿ ಬರಬಹುದು. ಅನುಭವಗಳ ರೂಪದಲ್ಲಿ ಬರಬಹುದು. ಕಷ್ಟಕಾರ್ಪಣ್ಯಗಳ ರೂಪದಲ್ಲಿ ಬರಬಹುದು. Possibilities are limitless.

ಈ ಸಂಸಾರವೆಂಬ ಸುಂದರ(!) ಕನಸನ್ನು ಜ್ಞಾನವೆಂಬ ಸ್ವಪ್ನಸಿಂಹ ಪದೇ ಪದೇ ಭಂಗಗೊಳಿಸಿದಾಗ ಮೊದಮೊದಲು ರಸಭಂಗವಾಗಿ ಕಿರಿಕಿರಿ ಉಂಟಾದರೂ ಮನುಷ್ಯ ತನ್ನ ಅಸ್ತಿತ್ವಕ್ಕೆ ಸಂಬಂಧಪಟ್ಟ ಕೆಲವು ಅತಿ ಮುಖ್ಯ ಪ್ರಶ್ನೆಗಳನ್ನು ಕೇಳಲು ಶುರು ಮಾಡುತ್ತಾನೆ. ಆ ಪ್ರಕ್ರಿಯೆ ಒಮ್ಮೆ ಆರಂಭವಾಯಿತೆಂದರೆ ಮೋಕ್ಷದತ್ತ ಹೊರಟಂತೆಯೇ. ಸಾವಿರಾರು ಜನ್ಮ ಬೇಕಾಗಬಹುದು. ಆದರೆ ಗುರಿಯತ್ತ ಬದಲಾಗದ ಪ್ರಯಾಣ ಶುರುವಾಗಿರುತ್ತದೆ.

ಮಿಥ್ಯೆಗಳೇ ಆದರೂ ವೇದ, ಉಪನಿಷತ್ತು, ಇತ್ಯಾದಿಗಳ ಉಪಯುಕ್ತತೆಯನ್ನು ಮನದಟ್ಟು ಮಾಡಿಸಲು ವೇದಾಂತಿಗಳು ಮತ್ತೊಂದು ದೃಷ್ಟಾಂತವನ್ನು ಕೊಡುತ್ತಾರೆ.

ಕಾಡಿನಲ್ಲಿ ನಡೆದುಹೋಗುತ್ತಿರುವಾಗ ಒಂದು ಮುಳ್ಳು ಕಾಲಿಗೆ ಚುಚ್ಚುತ್ತದೆ. ಮುಳ್ಳನ್ನು ತೆಗೆದೆಸೆದರೂ ಮುಳ್ಳಿನ ಒಂದು ಸಣ್ಣ ಚೂರು ಪಾದದಲ್ಲೇ ಉಳಿದುಕೊಳ್ಳುತ್ತದೆ. ಆಗ ಏನು ಮಾಡುತ್ತೀರಿ? ಮುಳ್ಳಿನ ಚೂರನ್ನು ಪಾದದಲ್ಲೇ ಇಟ್ಟುಕೊಂಡು ಮುಂದುವರೆಯುವದು ಅಪಾಯ. ಮುಂದೆ infection ಆಗಿ ಹೆಚ್ಚಿನ ಅಪಾಯ ಆಗಬಹುದು. ಮುಳ್ಳಿನ ಚೂರನ್ನು ತೆಗೆದುಹಾಕೋಣ ಅಂದರೆ ಅದಕ್ಕೆ ಬೇಕಾದ ಸೂಜಿ ಇತ್ಯಾದಿ ಸಲಕರಣೆ ತುರ್ತಕ್ಕೆ ನಿಮ್ಮಲ್ಲಿ ಇಲ್ಲ. ಏನು ಮಾಡಬೇಕು?

ಮತ್ತೊಂದು ಚೂಪಾದ ಮುಳ್ಳನ್ನು ತೆಗೆದುಕೊಳ್ಳಿ. ಆ ಮುಳ್ಳಿನಿಂದ ಪಾದದಲ್ಲಿರುವ ಮುಳ್ಳಿನ ಚೂರನ್ನು ಜತನದಿಂದ ತೆಗೆಯಿರಿ. ನಂತರ ಮುಳ್ಳಿನ ಚೂರನ್ನು ಮತ್ತು ಅದನ್ನು ತೆಗೆಯಲು ಉಪಯೋಗಿಸಿದ ಮುಳ್ಳನ್ನು, ಎರಡನ್ನೂ ಕೂಡ, ಎಸೆದು ಮುನ್ನೆಡೆಯಿರಿ.

ಇಲ್ಲಿ ಪಾದದಲ್ಲಿ ಹೊಕ್ಕಿರುವ ಮುಳ್ಳು ಅಜ್ಞಾನ (ಮಾಯೆ). ಅದನ್ನು ತೆಗೆಯಲು ಉಪಯೋಗಿಸಿದ್ದು ಕೂಡ ಮುಳ್ಳೇ. ಅದು ಜ್ಞಾನ. ಮುಳ್ಳಾದರೇನಾಯಿತು? ಉಪಯೋಗಕ್ಕೆ ಬಂತು ತಾನೇ? ವೇದೋಪನಿಷತ್ತಿನ ಮೇಲೆ ಆಧಾರಿತ ವೇದಾಂತ ಜ್ಞಾನ ಮತ್ತೊಂದು ಮುಳ್ಳಿದ್ದಂತೆ. ಅಜ್ಞಾನವೆಂಬ ಮುಳ್ಳನ್ನು ಜ್ಞಾನವೆಂಬ ಮತ್ತೊಂದು ಮುಳ್ಳಿನಿಂದ ತೆಗೆಯಬೇಕು. ನಂತರ ಎರಡೂ ಮುಳ್ಳುಗಳನ್ನು ಎಸೆಯಬೇಕು.

ಜ್ಞಾನವೆಂಬ ಮುಳ್ಳು ಚೆನ್ನಾಗಿದೆ ಅಂತ ಜೊತೆಗಿಟ್ಟುಕೊಂಡರೆ ಉಪಯೋಗವಿಲ್ಲ. That is missing the point. ಅಂತವರು ಪಂಡಿತರಾದಾರೇ ವಿನಃ ಜ್ಞಾನಿಗಳಾಗುವದಿಲ್ಲ. ಆದರೆ ವೇದಾಂತ ಅಧ್ಯಯನ ಮಾಡುವ ಹಲವಾರು ಜನ ಕೇವಲ ಪಂಡಿತರಾಗುತ್ತಾರೆ ವಿನಃ ಜ್ಞಾನಿಗಳಾಗುವದಿಲ್ಲ. ಅವರಿಗೆ ಮುಳ್ಳಿನಿಂದ ಮುಳ್ಳನ್ನು ತೆಗೆಯಬಹುದು ಎಂಬ ವಿವೇಕ ಮೂಡಿರುವದಿಲ್ಲ. ಜ್ಞಾನವೆಂಬ ಮುಳ್ಳನ್ನು ಹಿಡಿದುಕೊಂಡು ಮಂದಿ ಮೈಗೆ ಚುಚ್ಚುತ್ತ ಅಡ್ಡಾಡುತ್ತಿರುತ್ತಾರೆ. ತಲೆ ತಿನ್ನುವ ವೇದಾಂತಿಗಳು. ದೀಡ ಪಂಡಿತರು.

ಆಧುನಿಕ ವೇದಾಂತಿಗಳು ಮತ್ತೊಂದು ದೃಷ್ಟಾಂತವನ್ನು ಕೊಡುತ್ತಾರೆ. ಪೋಲ್ ವಾಲ್ಟ್ (pole vault) ಕ್ರೀಡೆಯ ಬಗ್ಗೆ ನಿಮಗೆ ಗೊತ್ತಿರಬಹುದು. ಒಂದು ಉದ್ದನೆಯ ಗಳವನ್ನು ಹಿಡಿದು, ವೇಗವಾಗಿ ಓಡಿಬಂದು, ಗಳವನ್ನು ಭೂಮಿ ಮೇಲೆ ಊರಿ, ಅದನ್ನು ಬಲವಾಗಿ ಬಗ್ಗಿಸಿ, ಬಗ್ಗಿಸಿದಾಗ ಆಕರವಾದ spring ಶಕ್ತಿಯಿಂದ ಮೇಲೆ ಹೋಗುವಾಗ ಅದರ ಜೊತೆಯೇ ಮೇಲೆ ಹೋಗಿ, ಅತಿ ಎತ್ತರಕ್ಕೆ ಹೋದಾಗ ಗಳವನ್ನು ಬಿಟ್ಟು ಹಾರುವದು ಪೋಲ್ ವಾಲ್ಟ್. ಮೇಲೆ ಹೋದಾಗ ಗಳವನ್ನು ಬಿಡಲಿಲ್ಲ ಅಂದರೆ ಹಾರಲು ಆಗುವದಿಲ್ಲ. ಕೆಳಗೆ ಬೀಳಬೇಕಾಗುತ್ತದೆ. ವೇದೋಪನಿಷತ್ತಿನ ಜ್ಞಾನ ಎಂದರೆ ಪೋಲ್ ವಾಲ್ಟಿನ ಗಳವಿದ್ದಂತೆ. ಎತ್ತರಕ್ಕೆ ಹಾರಲು ಬೇಕೇಬೇಕು. ಆದರೆ ಅಜ್ಞಾನದ hurdle ಪಾರಾಗಬೇಕು ಅಂದರೆ ಸರಿಯಾದ ಸಮಯದಲ್ಲಿ ಗಳವನ್ನು ಬಿಟ್ಟು ಛಲಾಂಗ್ ಹೊಡೆಯಲೇಬೇಕು. ಗಳ ಚೆನ್ನಾಗಿದೆ, ಮೇಲೆ ಬರಲು ಸಹಾಯ ಮಾಡಿದೆ ಅಂತ ಮೋಹ ತೋರುವಂತಿಲ್ಲ.

ಮಿಥ್ಯೆಯ ಬಗ್ಗೆ ಒಂದು ಸಣ್ಣ ವಿವರಣೆ. ಮಿಥ್ಯೆ ಅಂದರೆ ಸುಳ್ಳು ಅಂತಲ್ಲ. ಮಿಥ್ಯೆ ಅಂದರೆ ಸಂಪೂರ್ಣ ಸತ್ಯವಲ್ಲ ಅಷ್ಟೇ. ವೇದಾಂತಿಗಳು ಅನೇಕ ಉದಾಹರಣೆ ಕೊಡುತ್ತಾರೆ. ಕನ್ನಡಿಯಲ್ಲಿನ ಪ್ರತಿಬಿಂಬ. ಕಣ್ಣಿಗೆ ಕಾಣುತ್ತದೆ. ಆದರೆ ತಂದುಕೊಡಿ ಅಂದರೆ ಸಾಧ್ಯವಿಲ್ಲ. ಮರಭೂಮಿಯಲ್ಲಿ ಕಾಣುವ ಮೃಗಜಲ (mirage) ಕೂಡ ಮಿಥ್ಯೆ. ಥೇಟ್ ನೀರಿನಂತೆಯೇ ಕಾಣುತ್ತದೆ. ಹೋಗಿ ನೋಡಿದರೆ ನೀರು ಇರುವದಿಲ್ಲ. ಜಾದೂಗಾರ ಏನೇನೋ ಜಾದೂ ಮಾಡುತ್ತಾನೆ. ಎಲ್ಲ ನೈಜವಾಗಿರುತ್ತದೆ. ಆದರೆ ನಿಜವಾಗಿರುವದಿಲ್ಲ.

ಸಿಂಹಸ್ವಪ್ನದ ಬಗ್ಗೆ ಕೇಳಿದ್ದೆ. ಆದರೆ ಸ್ವಪ್ನಸಿಂಹದ ಬಗ್ಗೆ ಕೇಳಿರಲಿಲ್ಲ. ಮನ್ನಿತ್ತಲಾಗೆ ಪಾರ್ಥಸಾರಥಿ ಎಂಬ ವೇದಾಂತಿಗಳು ಬರೆದ ಪುಸ್ತಕ ಓದುತ್ತಿದ್ದೆ. ಅದರಲ್ಲಿ ಸ್ವಪ್ನಸಿಂಹ ಬಂತು. ಸ್ವಲ್ಪ ಮಟ್ಟಿಗಾದರೂ ಅಜ್ಞಾನದ ಸುಂದರ ಕನಸಿನಿಂದ ಬಡಿದೆಬ್ಬಿಸಿತು. ಮತ್ತೊಮ್ಮೆ ಅಜ್ಞಾನದ ನಿದ್ದೆ ಬಂದು ಅದರಲ್ಲಿ ಸಂಸಾರವೆಂಬ ಸುಂದರ ಸ್ವಪ್ನದಲ್ಲಿ ಮುಳುಗಿಹೋಗುವ ಮೊದಲು ಮುಂದೊಂದು ದಿನ ಮತ್ತೊಮ್ಮೆ ಸ್ವಪ್ನಸಿಂಹ ದರ್ಶನವಾಗುವವರೆಗೆ ಮಾಹಿತಿಗೆ ಇರಲಿ ಅಂತ ಇಷ್ಟೆಲ್ಲ ಬರೆದೆ ಅಷ್ಟೇ! :)

ಸಿಂಹಸ್ವಪ್ನಕ್ಕೂ ಸ್ವಪ್ನಸಿಂಹಕ್ಕೂ ಏನು ಸಂಬಂಧ ಎಂಬ ಜಿಜ್ಞಾಸೆ. ಈಗ ಈ ಶಬ್ದಗಳ etymology ಹುಡುಕಿಕೊಂಡು ಹೋಗಬೇಕು. ಹೀಗೆ ಏನೇನೋ ಹುಡುಕುವದರಲ್ಲೂ ಮಜಾ ಇದೆ ಬಿಡಿ.

'ಸ್ವಪ್ನಸಿಂಹ' ಮಾಹಿತಿ ಆಧಾರ: Vedanta Treatise - The Eternities by A. Parthasarathy

ಸುಪ್ರಸಿದ್ಧ ಯಕ್ಷಗಾನ ಕಲಾವಿದರಾಗಿದ್ದ ಕರ್ಕಿ ಕೃಷ್ಣ ಹಾಸ್ಯಗಾರರು ಅದ್ಭುತ ಸಿಂಹನೃತ್ಯ ಪ್ರಯೋಗ ಮಾಡುತ್ತಿದ್ದರು. ಕೆಳಗೆ ಹಾಕಿದ್ದೇನೆ. ನೋಡಿ ಎಂಜಾಯ್ ಮಾಡಿ.

Saturday, October 14, 2017

ಇರುವ ಸಂಬಂಧಗಳನ್ನು ಹೇಳಿಕೊಳ್ಳಲೇನು ಧಾಡಿ!?

'ನಾನು ಚಿಕ್ಕವಳಿದ್ದಾಗ ಹನುಮಂತಪ್ಪ ನನ್ನನ್ನು ದಿನಾ ಸೈಕಲ್ ಮೇಲೆ ಕೂಡಿಸಿಕೊಂಡು ಹೋಗಿ ಸ್ಕೂಲಿಗೆ ಬಿಟ್ಟುಬರುತ್ತಿದ್ದ.'

'ನಾನು ಚಿಕ್ಕವನಿದ್ದಾಗ ಶಾಂತಮ್ಮ ದಿನಾ ರುಚಿರುಚಿ ಅಡಿಗೆ ಮಾಡಿ, ನನ್ನ ಟಿಫನ್ ಬಾಕ್ಸ್ ತುಂಬಿಸಿ, ಸ್ಕೂಲಿಗೆ ಕಳಿಸುತ್ತಿದ್ದಳು.'

ಯಾರಾದರೂ ಹೀಗೆ ಹೇಳಿದರೆ ಏನೆಂದುಕೊಳ್ಳುತ್ತೀರಿ? ಮೇಲೆ ಹೇಳಿದ ಹನುಮಂತಪ್ಪ, ಶಾಂತಮ್ಮ ಯಾರಾಗಿರಬಹುದು ಎಂದು ನಿಮ್ಮ ಊಹೆ?

ಹನುಮಂತಪ್ಪ ಮನೆಯ ನಂಬಿಕಸ್ಥ ಕೆಲಸದಾಳಿರಬಹುದು. ಶಾಂತಮ್ಮ ಮನೆಯ ಅಕ್ಕರೆಯ ಅಡಿಗೆ ಮಾಡುವ ಮಹಿಳೆಯಾಗಿರಬಹುದು ಎಂದುಕೊಂಡರೆ ಅದು ಸಹಜ.

ಆದರೆ...ಹನುಮಂತಪ್ಪ ಅವರ ತಂದೆಯೆಂದೂ, ಶಾಂತಮ್ಮ ಅವರ ತಾಯಿಯೆಂದು ಯಾರಾದರೂ ಸ್ಪಷ್ಟೀಕರಣ ನೀಡಿದರೆ ನಂಬಲು ಕಷ್ಟವಾಗುತ್ತದೆ ತಾನೇ? ತಂದೆಯನ್ನು, ತಾಯಿಯನ್ನು ಇಷ್ಟು casual ಆಗಿ ಹೆಸರನ್ನು ಉಪಯೋಗಿಸಿ ಕರೆಯುವವರೂ ಇರುತ್ತಾರೆಯೇ ಎಂದು ಮೂಗಿನ ಮೇಲೆ ಬೆರಳಿಡಬೇಕಾದೀತು.

ಇಂತಹ ಸನ್ನಿವೇಶ ತುಂಬಾ ವಿರಳ ಬಿಡಿ. ವಿರಳವೇನು ಅಸಾಧ್ಯ ಅಂತಲೇ ಹೇಳಿ. ಯಾರೂ ತಮ್ಮ ತಂದೆಯನ್ನು, ತಾಯಿಯನ್ನು ಹೆಸರಿಡಿದು ಮಾತಾಡುವದಿಲ್ಲ. ಒಂದು ವೇಳೆ ಹಾಗೆ ಮಾತಾಡಿದರೆ ಸ್ಕ್ರೂ ಲೂಸಾದ ಕೇಸ್ ಎಂದುಕೊಂಡು ಅವರ ಮನಃಸ್ಥಿತಿಯ ಮೇಲೆ ಕನಿಕರ ತೋರಬಹುದು ಬಿಡಿ.

'ಈ ಸಂಜೀವ ನನ್ನ ಒಂದು ಮಾತೂ ಕೇಳಲ್ಲ. ವೀಕೆಂಡ್ ಬಂತು ಅಂದರೆ ಗೆಳೆಯರು ಅಂತ ಹೊರಟುಬಿಡುತ್ತಾನೆ,' ಅನ್ನುತ್ತಾಳೆ ಒಬ್ಬ ಮಹಿಳೆ.

'ಅಯ್ಯೋ! ರಂಜನಾ ಕೂಡ ಹಾಗೇ. ವೀಕೆಂಡ್ ಬಂತು ಅಂದರೆ ಆಕೆಯ ಫ್ರೆಂಡ್ಸ್ ಜೊತೆನೇ ಇರುತ್ತಾಳೆ,' ಅನ್ನುವವ ಒಬ್ಬ ಗಂಡಸು.

ಈಗ ಇವರ ಮಾತು ಕೇಳುತ್ತಿರುವ ನಮ್ಮಂತವರು ಇವರ ಮಾತಿನಲ್ಲಿ ಬಂದ ಸಂಜೀವ ಯಾರು, ರಂಜನಾ ಯಾರು ಎಂದು ತಲೆಕೆಡಿಸಿಕೊಳ್ಳಬೇಕು.

'ಸಂಜೀವ ಯಾರು? ನಿನ್ನ ಮಗನೇ?'

'ಅಲ್ಲ!'

'ಮತ್ತೇ? ನಿನ್ನ ಅಣ್ಣ ತಮ್ಮಂದಿರೋ ಹೇಗೆ?'

'ಅಯ್ಯೋ! ಅಲ್ಲ!'

'ಮತ್ತೆ!!? ನಿನ್ನ ಅಪ್ಪನೇ? ಪಿತಾಶ್ರೀ?!!'

'ಅಯ್ಯೋ! ನಿಮಗೇನಾಗಿದೆ? ತಲೆ ಸರಿಯಿದೆಯೇ?'

'ಯಾಕೆ?'

'ಸಂಜೀವ ನನ್ನ ಗಂಡ!'

ಈ ಪುಣ್ಯಾತ್ಗಿತ್ತಿಯ ಕಥಾನಾಯಕ, ವೀಕೆಂಡ್ ವೀರ ಸಂಜೀವ ಈಕೆಯ ಗಂಡ. ಹಾಗಂತ ಈಕೆ ಹೇಳಲಿಲ್ಲ. ಯಾರೋ ಕ್ಯಾಶುಯಲ್ ವ್ಯಕ್ತಿ ಎನ್ನುವಂತೆ ಕೇವಲ ಹೆಸರಿಡಿದು ಮಾತಾಡಿದಳು. ಹೆಸರಿಡಿದು ಕರೆಯುತ್ತಿದ್ದಾರೆ ಅಂದ ಮೇಲೆ ಮಗನೋ, ಅಣ್ಣನೋ, ತಮ್ಮನೋ ಅಂದುಕೊಂಡರೆ ಅಲ್ಲವಂತೆ. ನೋಡಿದರೆ ಹೋಗಿ ಹೋಗಿ ಪತಿಶ್ರೀ ಉರ್ಫ್ ಪತಿ ಪರಮೇಶ್ವರ.

ರಂಜನಾ, ರಂಜನಾ ಅಂತ ಬೊಬ್ಬೆ ಹೊಡೆದ ಗಂಡಸಿನ ಕೇಸ್ ಕೂಡ ಏನೂ ಭಿನ್ನವಾಗಿರುವದಿಲ್ಲ. ಆಕೆ ಅವನ ಮಗಳೋ, ಅಕ್ಕನೋ, ತಂಗಿಯೋ ಎಂದು ನೋಡಿದರೆ ಪತ್ನಿಶ್ರೀ ಉರ್ಫ್ ಹೆಂಡತಿಯಾಗಿರುತ್ತಾಳೆ.

ಹೆಸರು ಹಿಡಿದು ಸಂಬಂಧಗಳನ್ನು ಕರೆಯುವದು ಮಹಾನ್ ದರಿದ್ರ ಪದ್ಧತಿ. ಇಲ್ಲಿನ ಅಮೇರಿಕನ್ ಜನರು ಹಾಗೇ ಮಾಡುತ್ತಾರೆ. ಗಂಡ, ಹೆಂಡತಿಯ ಹೆಸರಿಡಿದು ಕರೆಯುತ್ತಾರೆ. ಬೇರೆಯವರ ಜೊತೆ ಮಾತಾಡುವಾಗ ಕೂಡ ಹಾಗೇ ಹೇಳುತ್ತಾರೆ. ಸಂದರ್ಭಾನುಸಾರವಾಗಿ ನಾವೇ ಅರ್ಥ ಮಾಡಿಕೊಳ್ಳಬೇಕು ಯಾರ ಬಗ್ಗೆ ಮಾತಾಡುತ್ತಿದ್ದಾರೆಂದು. ಇವರಿಗೆ ಗಂಡನ್ಯಾರೋ ಮಿಂಡನ್ಯಾರೋ. ಹೆಂಡತಿ ಯಾರೋ ಮಿಂಡತಿ ಯಾರೋ. ಇವತ್ತಿದ್ದ ಗಂಡ ನಾಳೆ ಇರುವದಿಲ್ಲ. ಹಿತ್ತಲಿನಲ್ಲಿ ಕೂತ ಹೆಂಡತಿ ಹೆಂಡ ಇಳಿಸುತಿದ್ದರೆ ಮುಂಬಾಗಿಲಿನಲ್ಲಿ ಮಿಂಡತಿ ಮದವೇರಿ ಕುಣಿಯುತ್ತಿರುತ್ತಾಳೆ. ಇಬ್ಬರ ನಡುವೆ ಒಬ್ಬಳಿಗೆ ಗಂಡನಾಗಿ ಇನ್ನೊಬ್ಬಳಿಗೆ ಬಾಯ್ ಫ್ರೆಂಡ್ ಆಗಿ ಡಬಲ್ ಡ್ಯೂಟಿಯನ್ನು ಖುಷಿಯಿಂದಲೇ ಮಾಡುತ್ತಿರುತ್ತಾನೆ ಒಬ್ಬ ಗಂಡು ಪ್ರಾಣಿ. ಹೀಗಿರುತ್ತವೆ ಇಲ್ಲಿನ ಜನರ ಸಂಬಂಧಗಳು!

ಇಂತಹ ಹಡಪೇಶಿ ಸಂಸ್ಕೃತಿಯ ಇಲ್ಲಿನ ಸ್ವೇಚ್ಛಾಚಾರಿ ಜನ ತಂದೆ, ತಾಯಿಗೆ ಒಮ್ಮೊಮ್ಮೆ My old man, My old lady ಅಂತ ಕೂಡ ಅನ್ನುತ್ತಾರೆ. ಆದರೂ ಕಮ್ಮಿ. ತಂದೆ ತಾಯಿಗೆ ಇವರೂ ಕೂಡ dad, mom ಅನ್ನುವ ಸಂಪ್ರದಾಯ ಇಟ್ಟುಕೊಂಡಿದ್ದಾರೆ. ತಂದೆತಾಯಿಯನ್ನೂ ಹೆಸರಿಡಿದು ಕರೆಯುವ ಕೆಟ್ಟ ಆಚಾರವನ್ನು ಶುರುಮಾಡಿಕೊಂಡಿಲ್ಲ. ಇನ್ನೂ ಕಾಲ ಅಷ್ಟು ಕೆಟ್ಟಿಲ್ಲ.

ಇಲ್ಲಿನ ಜನ ಹಾಗೆನ್ನುತ್ತಾರೆ. ಇಲ್ಲಿ ಹೀಗೇ ಅನ್ನುವ ಕಾರಣಕ್ಕೆ ನಮ್ಮ ಜನ ಕೂಡ ಹಾಗೇ ಮಾಡಿದರೆ ವಿಚಿತ್ರವಾಗಿ ಕಾಣುತ್ತದೆ. ಸಿಕ್ಕಾಪಟ್ಟೆ ಕಿರಿಕಿರಿಯಾಗುತ್ತದೆ.

ಕಾಲ ಬದಲಾಗಿದೆ. ಅದು ನಮಗೂ ಗೊತ್ತಿದೆ. ಮೊದಲಿನಂತೆ ಮಹಿಳೆಯರು ಗಂಡನಿಗೆ ಬಹುವಚನ ಉಪಯೋಗಿಸಿ 'ನಮ್ಮ ಮನೆಯವರು,' 'ನಮ್ಮ ಯಜಮಾನರು,' ಎಂದೆಲ್ಲ ಹೇಳಬೇಕು ಅಂತ ಯಾರೂ ನಿರೀಕ್ಷೆ ಮಾಡುವದಿಲ್ಲ. ಹಾಗೆಯೇ ಗಂಡ ಹೆಂಡತಿಯನ್ನು 'ಆಕೆ', 'ಮನೆಯಾಕೆ,' ಅಂತ ಕಿಮ್ಮತ್ತಿಲ್ಲದೆ ಕರೆದರೂ ಓಕೆ ಅಂತ ಯಾರೂ ಹೇಳುತ್ತಿಲ್ಲ. ಆದರೆ ಇರುವ ಶಾಸ್ತ್ರೋಕ್ತ ಸಂಬಂಧಗಳನ್ನು ಬಾಯ್ತುಂಬ ಹೇಳಲು ಏನು ಧಾಡಿ? ನನ್ನ ಪತಿ, ನನ್ನ ಪತ್ನಿ, ನಮ್ಮ ಮಕ್ಕಳು ಎಂದು ಹೇಳದೇ ಕೇವಲ ಹೆಸರಿಡಿದು ಕೂಗಿ, ಅದು ಉಳಿದವರಿಗೂ ಅರ್ಥವಾಗಬೇಕು ಅಂತ ನಿರೀಕ್ಷೆ ಮಾಡಿದಾಗ ಅಂತವರನ್ನು ಹಿಡಿದು ಬುರುಡೆಗೆ ಸಮಾ ಎರಡು ಚಡಾಬಡಾ ಅಂತ ಬಾರಿಸಿಬಿಡಬೇಕು ಅನ್ನಿಸುತ್ತದೆ. ಅಲ್ಲರೀ.... ನನ್ನ ಗಂಡ ಸಂಜೀವ. ನನ್ನ ಪತ್ನಿ ರಂಜನಾ ಅಂತ ಒಂದು ಬಾರಿ, ಕೇವಲ ಒಂದು ಬಾರಿ, ಹೇಳಿ ನಂತರ ಮಾತಿಗೊಮ್ಮೆ ಕೇವಲ ಹೆಸರಿಡಿದೇ ಕೂಗಿ. ಹಾಗೇ ಕೂಗಿಕೊಂಡು ಸಾಯಿರಿ. ಅಭ್ಯಂತರವಿಲ್ಲ. ಅಷ್ಟೂ ಮಾಡಲಿಲ್ಲ ಅಂದರೆ ಹೇಗೆ?

ಕೆಲಸದ ಜಾಗದಲ್ಲಿ ತುಂಬಾ ಜನ ಭಾರತೀಯರಿದ್ದಾರೆ. ಎಲ್ಲರೂ ಈ ಕೆಟ್ಟ ಅಭ್ಯಾಸ ಕಲಿತವರೇ. ನಾನಂತೂ ಮುದ್ದಾಂ ಕೊಕ್ಕೆ ಹಾಕುತ್ತೇನೆ. ಗಂಡನ ಹೆಸರು ಹೇಳಿದರೆ 'ಯಾರು ನಿಮ್ಮಪ್ಪನೇ?' ಎಂದು ಕೇಳಿ ಅವರು ಕೆಟ್ಟ ಮುಖ ಮಾಡಿಕೊಂಡು, 'ಅಲ್ಲ ನನ್ನ ಗಂಡ' ಎಂದು ಹೇಳುವಂತೆ ಮಾಡಿದಾಗಲೇ ನನಗೆ ಸಂತೃಪ್ತಿ. ಹಾಗೆಯೇ ಹೆಂಡತಿಯ ಹೆಸರು ಹೇಳಿದವರಿಗೆ 'ಯಾರು ನಿನ್ನ ಗರ್ಲ್ ಫ್ರೆಂಡೇ?' ಎಂದು ಕಿಚಾಯಿಸಿ ಮುಜಗರಕ್ಕೀಡು ಮಾಡಲಿಲ್ಲ ಅಂದರೆ ಉಂಡನ್ನ ಅರಗುವದಿಲ್ಲ. ಒಬ್ಬರಿಗೆ ಒಮ್ಮೆ ಮಾತ್ರ ಹಾಗೆ ಮಾಡುತ್ತೇನೆ. ಅಷ್ಟೇ! :)

ಸಂಬಂಧಗಳೇ ಕಮ್ಮಿಯಾಗುತ್ತಿವೆ. ಇರುವ ಸಂಬಂಧಗಳು ಮೌಲ್ಯ ಕಳೆದುಕೊಳ್ಳುತ್ತಿವೆ. ಮತ್ತೆ ಸಂಬಂಧಗಳಲ್ಲೇ ಸಕಲ ಐಶ್ವರ್ಯವನ್ನೂ, ಸರ್ವಸ್ವವನ್ನೂ ಕಂಡುಕೊಳ್ಳುವದು ನಮ್ಮ ಸಂಸ್ಕೃತಿ. ದೂರದೂರದ ಸಂಬಂಧಗಳನ್ನೂ ಕೂಡ ನೆನಪಿಟ್ಟುಕೊಂಡು ಅವನ್ನು celebrate ಮಾಡುವ ದೊಡ್ಡ ಮನಸ್ಸು, ಶ್ರೀಮಂತ ಸಂಸ್ಕೃತಿ ನಮ್ಮದು. ಹೀಗಿರುವಾಗ ಸಂಬಂಧಗಳ ಮನೆ ಹಾಳಾಗಲಿ, ಎದುರಿಗೆ ಕುಳಿತವರಿಗೆ ತಿಳಿಯಲಿ ಅಂತಾದರೂ ಬಾಯ್ಬಿಟ್ಟು ಒಮ್ಮೆ, ನಿಮ್ಮ ಲಡಕಾಸಿ ಇಂಗ್ಲೀಷಿನಲ್ಲೇ ಬೇಕಾದರೆ, My husband so and so or My wife so and so ಎಂದು ಹೇಳಲಿಕ್ಕೆ ಈ ಜನರಿಗೆ ಏನು ಧಾಡಿರೀ?

ವಿ.ಸೂ: ಮೊದಲು ತಲೆಗೆ ಬಂದ ಹೆಸರುಗಳನ್ನು ಉಪಯೋಗಿಸಿದ್ದೇನೆ. ತಮ್ಮ ಕುರಿತಾಗಿ ಬರೆದಿದ್ದು ಎಂದು ಯಾರೂ ತಿಳಿಯಬೇಕಾಗಿಲ್ಲ. ತಿಳಿದುಕೊಂಡರೆ ಅವರ ಕರ್ಮ ಅಷ್ಟೇ.

Aarushi Talwar double murder mystery

Recently the parents of Aarushi have been acquitted by the high court of UP for the lack of evidence, giving them the benefit of doubt in the double murder of their daughter Aarushi and servant Hemraj.

It will surely remain as one of the most mysterious murder cases of all times. The very first investigation was done by the local police. They arrested the father. Then CBI stepped in. The first CBI team gave clean chit to the parents but suspected the 3 friends of the murdered servant of having molested the girl and killed the servant who objected to it. However due to lack of firm evidence they were not charged.

Then there was a change in the leadership of CBI. A new team was formed. That team once again suspected the parents of killing their daughter and servant. Termed it as honor killing. However, the second CBI team also stated that they did not have enough evidence to bring charges against  Talwars, the parents. A closure report was submitted to the court. The parents were free but they were not satisfied with the probe. They wanted the real killers found out. They petitioned in the court against the closure report and ending the probe. I don't know what to call it but the particular judge who heard their petition took a very unpredictable and surprising decision - the closure report has enough evidence to charge the parents. Charge them and hold the trial!!!! Very strange decision to say the least!

Now the parents were charged. A moment ago they were free and now charged of having committed double murder! And one victim is the only daughter of the couple!! Go figure!

The lower court convicted them based on the charge-sheet which was based on the closure report of all things for God's sake! It is hard to understand how the lower court found enough evidence to establish, beyond all reasonable doubt, that the parents are GUILTY!!! Must be one of the rarest cases. The investigating agency itself had said they did not have enough evidence to charge in the first place but the judge indeed found them guilty as charged and sentenced them for life term in jail.

Finally after 4 years, the high court has acquitted them for lack of evidence. Hopefully justice is done. CBI can always go to supreme court, who knows! They may not because they did not want the case tried in the first place.

If you read the several books and watch a couple of movies that have appeared on the subject, you get all the details. As different investigative groups have felt, sometimes parents indeed look responsible for the double murder. Sometimes the acquaintances of the servant do indeed look responsible. But, the point, according to seasoned investigators, was the evidence was not adequate to establish one or the other as guilty beyond reasonable doubt. That's the crux. We might be very strongly drawn to judge someone guilty based on certain facts but such judgement is considered biased and not complete.

It took 9 years to come to this conclusion. The parents were arrested, released, arrested again and finally sent to jail since 2013 till now. Effectively nine years of their life have been wasted. Losing the only child and its pain, that you can't quantify. Defending themselves must have made them take huge debts. Some of the very senior lawyers charge tens of lakhs of rupees per appearance.

Once again some people have very correctly raised the point of needing to start to clean up the ancient and arcane Indian criminal justice system which is a remnant from the days of the British Raj. As some eminent legal personality had pointed out, British criminal system in India and other colonies was put in place to suppress the natives. It was not there to dispense justice. Just the opposite. It was there to persecute the natives. We have been following the same cruel system even after 70 years of independence from those evil people. Go and see in Britain how fine is their justice system. Very very rarely their citizens are mistreated or dealt a raw deal. The justice is delivered very quickly. That's the most important thing. If this or any case ends, say in 1-2 years at the max, no complaints. One has to accept that much time and inconvenience as part of living in a society. But 9 years? Not acceptable by any standards.

And another point is about granting bail. In other civilized countries, bail is granted almost by default. Bail is the norm and detaining without bail is an exception. But in India it's exactly the opposite. In very rare cases the accused is in a position to hamper investigation and influence witnesses. But, the old criminal justice system believes in locking up the accused without bail for a long time. So, by the time case comes for trial, the accused would have already served good amount of time regardless of guilty or not. The process of requesting and granting bail is the first thing that needs  major overhaul.

India did away with the jury system after the famous Nanavati case of 1960s. They felt it is very hard to entrust a group of 12 common people (jury) to understand fine legal  details of the trial, judicial details in a country where people are have very little or no education. It is true but it gave all the power to the judge. Made him/her like God with full control over the destiny of the accused. The judge is also a human being. They have their own failings. Is it wise to give all the power to one person like that? Definitely NOT. That is the reason behind the jury system. A legally trained person like judge may rush to judgement. Bias is more. It is hard to convince a group of 12 common people that someone is guilty. The prosecutors (accusing party) has to do a much much better job of explaining the case in most simplest terms and convince the jury that the accused is indeed guilty and the jury must award the most stringent sentence. The role of judge is only to guide and advise the members of jury during the trial and sentencing.

It is true that instituting the jury system in a large country like India with many poor people and poor infrastructure is very very hard. But the cases like Aarushi murder case bring out the need for trial by jury. In this case, the UP high court seriously criticized the way the lower court handled the case and called it as through the lower court judge enacted a drama. That shows how shabby was the trial at the lower court. If well endowed people like Talwars, who hired the best lawyers met such a treatment, you can imagine the plight of commoners without access to good legal representation. Pathetic!

If uniform country-wide jury system is not possible, at least, the accused should have right to demand trial by jury. The court may choose to charge extra for it but that must be permitted.

This is not the first high profile case where the higher court has totally overturned the judgement of the lower court. Not only that but also criticized the lower court for the way the trial was conducted.

Along with so called economic development, other aspects of the society also need to be developed. What's the use of economic prosperity if people have to constantly worry that they might become victims of a botched up judicial system and may end up spending years and years in jail when there was no case against them. Read again. I am saying no case against them. It does not mean they did not commit the crime. They may very well have committed the crime. But if there is not enough evidence, they are as not-guilty as any other person. That's why accused are pronounced not-guilty. Never pronounced INNOCENT. Justice system can't talk about innocence. It can only say guilty or not. That's it.

It has been already very late. Globalization, liberalization etc. started almost 30 years back. A lot of improvements have been made. A lot of prosperity has come. Now it is high time to start revising the legal system, criminal justice system. It will take good 30-40 years but a start must be made NOW. Otherwise don't be surprised if you are hauled and put in jail if your neighbor dies under suspicious circumstances and God forbid by chance you end up being accused!

Legal system should be such that nobody have to fear police, courts, jury etc. if they are clean. Only the really guilty have to be worried. That too only be worried of how to defend themselves against charges on them. Nobody need to worry that they may be victimized by the system. That's how it should be. No country or society can promise legal Nirvana but at least no victimization of the common man can be and must be aspired for.

If interested, read following books and watch following movies. All are excellent sources to get good information about the Aarushi double murder case.

Books:

Aarushi by Avirook Sen. A book by a journalist who followed the lower court trial very closely.

The killing of Aarushi and Murder of Justice by Rajesh Talwar. This Rajesh Talwar is different than the father of Aarushi who is also a Rajesh Talwar. The author is a lawyer. The highlight of this book is, in the book the author tries to develop a plausible alternate theory using his legal acumen. If parents did not commit those murders and if the friends of the servant did not commit them, whodunit?? Everyone is asking who killed Aarushi. Some answers may be found here.

Betrayed : My cousin's wrongful conviction for the murder of her daughter, Aarushi by Shree Paradkar. The author is a Canada based journalist and also the aunt of Aarushi (i.e. mother Nupur Talwar's cousin).

ಏನಾಯ್ತು ಮಗಳೇ by ರವಿ ಬೆಳಗೆರೆ - A book in Kannada based on the CBI report.

Movies:

Talvar - Excellent movie by Meghna Gulzar. Well made!

Rahasya - Loosely based on the incident. An ok movie.

Thursday, October 12, 2017

ಭಾವಿಗೆ ಬಿದ್ದ ಚಂದ್ರ

ಮುಲ್ಲಾ ನಸ್ರುದ್ದೀನ್ ಒಮ್ಮೆ ರಾತ್ರಿಯಲ್ಲಿ ನಡೆದು ಬರುತ್ತಿದ್ದ. ರಸ್ತೆ ಪಕ್ಕದಲ್ಲೊಂದು ಭಾವಿಯಿತ್ತು. ಯಾಕೋ ಇಣುಕಿ ನೋಡಿದ. ಭಾವಿಯ ನೀರಿನಲ್ಲಿ ಚಂದ್ರನನ್ನು ಕಂಡ. 

'ಅಯ್ಯೋ! ಚಂದ್ರ ನೀರಿನಲ್ಲಿ ಬಿದ್ದುಬಿಟ್ಟಿದ್ದಾನೆ. ದೊಡ್ಡ ಘಾತವಾಯಿತಲ್ಲ! ಚಂದ್ರನನ್ನು ತಕ್ಷಣ ರಕ್ಷಿಸಬೇಕು!' ಎಂದುಕೊಂಡ ಮುಲ್ಲಾ ನಸ್ರುದ್ದೀನ್. ಅಬ್ಬಾ! ಮುಲ್ಲಾನ ತಲೆಯೇ! ಅದಕ್ಕೊಂದು ದೊಡ್ಡ ಸಲಾಂ.

ಅಲ್ಲೇ ಅಕ್ಕಪಕ್ಕದವರ ಜೊತೆ ಮಾತಾಡಿ ಹೇಗೋ ಒಂದು ಹಗ್ಗ ಮತ್ತು ಅದಕ್ಕೊಂದು ಕೊಕ್ಕೆಯನ್ನು ಸಂಪಾದಿಸಿದ. ಹಗ್ಗದ ತುದಿಗೆ ಕೊಕ್ಕೆಯನ್ನು ಕಟ್ಟಿ ನೀರಿಗೆ ಇಳಿಬಿಟ್ಟ. ಭಾವಿಗೆ ಬಿದ್ದ ಚಂದ್ರನನ್ನು ಕೊಕ್ಕೆಯಿಂದ ಹಿಡಿದು ಮೇಲಕ್ಕೆತ್ತುವ ಪ್ರಯತ್ನ ಶುರುಮಾಡಿದ.

ಚಂದ್ರ ಕೊಕ್ಕೆಗೇನೋ ಸಿಗುತ್ತಿದ್ದ(!?). ಆದರೆ ಹಗ್ಗ ಮೇಲೆಳೆದಾಕ್ಷಣ ಜಾರಿ ಮತ್ತೆ ಭಾವಿಗೆ ಬಿದ್ದುಬಿಡುತ್ತಿದ್ದ. ಆದರೆ ಮುಲ್ಲಾ ನಸ್ರುದ್ದೀನ್ ಜಿದ್ದಿ ಮನುಷ್ಯ. ಅಷ್ಟು ಸುಲಭಕ್ಕೆ ಆಗದು ಎಂದು ಕೆಲಸ ಬಿಡುವವನಲ್ಲ. ಮರಳಿ ಯತ್ನವ ಮಾಡು ಎಂಬಂತೆ ಮತ್ತೆ ಮತ್ತೆ ಹಗ್ಗ ಇಳಿಬಿಟ್ಟು ಭಾವಿಗೆ ಬಿದ್ದ ಚಂದ್ರನನ್ನು ಮೇಲೆತ್ತಲು ಪ್ರಯತ್ನಿಸಿಯೇ ಪ್ರಯತ್ನಿಸಿದ.

ತುಂಬಾ ಹೊತ್ತಿನ ನಂತರ ಕೊಕ್ಕೆಗೆ ಏನೋ ಬರೋಬ್ಬರಿ ಸಿಕ್ಕಿಕೊಂಡಂತಾಯಿತು. ಸುಲಭವಾಗಿ ಹಗ್ಗವನ್ನು ಮೇಲೆ ಎಳೆಯಲು ಆಗಲಿಲ್ಲ.

'ಏನೋ ಬಹಳ ಭಾರವಾದದ್ದೇ ತಗಲಾಕಿಕೊಂಡಿದೆ. ಇಷ್ಟು ಹೊತ್ತಿನ ವರೆಗೆ ಕೊಕ್ಕೆಗೆ ಸಿಗದೇ ಕಾಡಿದ ಚಂದ್ರ ಈಗ ಸಿಕ್ಕಾಕಿಕೊಂಡಿದ್ದಾನೆ. ಇದೇ ಚಾನ್ಸ್. ಬಿಡಲೇಬಾರದು. ಇದ್ದೆಲ್ಲ ಶಕ್ತಿ ಹಾಕಿ ಎಳೆದೇಬಿಡಬೇಕು,' ಎಂದು ಮುಲ್ಲಾ ಧೃಡ ನಿರ್ಧಾರ ಮಾಡಿದ.

ಭಾವಿ ಕಟ್ಟೆಗೆ ಕಾಲು ಕೊಟ್ಟು, ಅಷ್ಟೂ ಶಕ್ತಿ ಹಾಕಿ, ಹಗ್ಗವನ್ನು ಎಳೆದ. ಕೊಕ್ಕೆ ಸಿಕ್ಕಾಕಿಕೊಂಡಿತ್ತು. ಮತ್ತೂ ಜೋರಾಗಿ ಎಳೆದ. ಎಳೆದ ಅಬ್ಬರಕ್ಕೆ ಹಗ್ಗ ಹರಿದುಕೊಂಡು ಮೇಲೆ ಬಂತು. ಹಗ್ಗ ಹರಿದು ಮೇಲೆ ಬಂದ ಅಬ್ಬರಕ್ಕೆ ಮುಲ್ಲಾ ನಸ್ರುದ್ದೀನ್ ಹಿಂದೆ ಸರಿದುಹೋಗಿ ಕುಸಿದು ಬಿದ್ದ.

ಬೆನ್ನು ನೆಲಕ್ಕೆ ಊರಿತ್ತು. ತಲೆ ನೆಲಕ್ಕೆ ಬಡಿದಿತ್ತು. ಒಂದು ಕ್ಷಣ ಕಣ್ಣಿಗೆ ಕತ್ತಲೆ ಬಂದಂತಾಯಿತು. ನಂತರ ಪ್ರಜ್ಞೆ ವಾಪಸ್ ಬಂತು. ನೆಲದ ಮೇಲೆ ಬಿದ್ದವ ಸಹಜವಾಗಿ ಕಣ್ತೆರೆದು ಮೇಲೆ ನೋಡಿದ. ಬಾನಿನಲ್ಲಿ ಚಂದ್ರ ನಗುತ್ತಿದ್ದ. ಅದನ್ನು ನೋಡಿದ ಮುಲ್ಲಾ ಸಂತುಷ್ಟನಾದ.

'ಭಾವಿಯಲ್ಲಿ ಬಿದ್ದಿದ್ದ ಚಂದ್ರನನ್ನು ರಕ್ಷಿಸಿಬಿಟ್ಟೆ. ನಾ ಎಳೆದ ಅಬ್ಬರಕ್ಕೆ ಭಾವಿಯಿಂದ ಮೇಲೆ ಬಂದ ಚಂದ್ರ ಮತ್ತೆ ಆಕಾಶಕ್ಕೆ ಹೋಗಿ ಅಲ್ಲಿ ಸ್ಥಾಪಿತನಾಗಿದ್ದಾನೆ. ನನ್ನ ಉಪಕಾರಕ್ಕೆ ಧನ್ಯವಾದ ಹೇಳುವವನಂತೆ ಮುಗುಳ್ನಗುತ್ತಿದ್ದಾನೆ'' ಎಂದುಕೊಂಡು ಮೈಕೈ ಕೊಡವಿಕೊಂಡು ತನ್ನ ದಾರಿ ಹಿಡಿದು ಹೋದ.

ಅಸಲಿಗೆ ಏನಾಗಿತ್ತು? ಕೊಕ್ಕೆ ಭಾವಿಯಲ್ಲಿನ ಕಲ್ಲಿಗೆ ಸಿಕ್ಕಾಕಿಕೊಂಡಿತ್ತು. ಜೋರಾಗಿ ಎಳೆದಾಗ ಹಗ್ಗ ತುಂಡಾಯಿತು. ಮುಲ್ಲಾ ನೆಲಕ್ಕುರುಳಿದ್ದ. ಕಣ್ಬಿಟ್ಟಾಗ ಮೇಲೆ ಮೇಲೆ ಚಂದ್ರ ಕಂಡಿದ್ದ.

ಈ ಕಥೆ ತುಂಬಾ ಸಿಲ್ಲಿ ಎನ್ನಿಸಬಹುದು. ಇಷ್ಟು ಬಾಲಿಶವಾದ ಮೌಢ್ಯ ಕಂಡು ಮುಲ್ಲಾ ನಸ್ರುದ್ದೀನನನ್ನು ಗೇಲಿ ಮಾಡಿ ನಗಬಹದು. ಆದರೆ ನಮ್ಮ ಮೌಢ್ಯವೇನೂ ಕಮ್ಮಿಯಿಲ್ಲ.

ಮುಕ್ತಿಗಾಗಿ (enlightenment) ಸಾಧನೆ ಮಾಡುವದೆಂದರೆ ಭಾವಿಗೆ ಬಿದ್ದ ಚಂದ್ರನನ್ನು ಮೇಲೆ ಎತ್ತಿದಂತೆ. How absurd!

ಚಂದ್ರ ಆಕಾಶದಲ್ಲೇ ಇದ್ದಾನೆ, ಭಾವಿಯಲ್ಲಿ ಕಾಣುವದು ಕೇವಲ ಪ್ರತಿಬಿಂಬ ಎಂದು ಮೊದಲೇ ಅರಿವಾಗಿಬಿಟ್ಟರೆ ಹಗ್ಗ ತಂದು, ಕೊಕ್ಕೆ ಹಾಕಿ, ಇದ್ದಬಿದ್ದ ಶಕ್ತಿಯನ್ನೆಲ್ಲ ಬಸಿದು ಚಂದ್ರನನ್ನು ಮೇಲೆ ತೆಗೆಯುವ ಕೆಲಸಕ್ಕೆ ಯಾರೂ ಇಳಿಯುವದಿಲ್ಲ. ಪರಮಾತ್ಮನೇ ಆದ ಜೀವಾತ್ಮ ನಾವು. ಪರಮಾತ್ಮನ ಪ್ರತಿಬಿಂಬ ಅಜ್ಞಾನವೆಂಬ ಭಾವಿಯಲ್ಲಿ ಜೀವಾತ್ಮ ರೂಪದಲ್ಲಿ ಕಾಣುತ್ತದೆ ಅಷ್ಟೇ ಎಂದು ಖಡಕ್ಕಾಗಿ ತಿಳಿದುಬಿಟ್ಟರೆ ಸಾಧನೆಯ ಅವಶ್ಯಕತೆಯೇ ಇರುವದಿಲ್ಲ. paradoxically ನಾವು ನಿತ್ಯಮುಕ್ತರು, ಬಂಧಿತರಲ್ಲ ಎಂದು ನಮಗೆ ಅರಿವಾಗುವದಿಲ್ಲ. ಅದೇ ಅಜ್ಞಾನ. so called ಸಾಧನೆ ಕೂಡ ಅದೇ ಅಜ್ಞಾನದ / ಮಾಯೆಯ ಪರಿಧಿಯಲ್ಲೇ ಬರುತ್ತದೆ.

ಹಾಗಾದರೆ ಅಧ್ಯಾತ್ಮ ಸಾಧನೆ ಮಾಡಬೇಕೋ ಬೇಡವೋ ಅಂತ ಪ್ರಶ್ನೆ ಬಂದರೆ ಉತ್ತರಿಸಲು ಮತ್ತೊಂದು ಕಥೆ ಕೇಳಿ.

ಒಮ್ಮೆ ಶಿಷ್ಯನೊಬ್ಬ ಗುರುಗಳ ಹತ್ತಿರ ಕೇಳಿದ, 'ಜ್ಞಾನೋದಯವಾಗಲು (ಮುಕ್ತಿ ಸಿಗಲು) ಏನು ಮಾಡಬೇಕು?'

'ಸೂರ್ಯೋದಯವಾಗಲು ಏನು ಮಾಡಬೇಕೋ ಅಷ್ಟು ಮಾಡು ಸಾಕು,' ಅಂದರು ಗುರುಗಳು.

'ಸೂರ್ಯೋದಯವಾಗಲು ನಾನು ಏನೂ ಮಾಡಬೇಕಿಲ್ಲ. ಅದು ತಾನಾಗೇ ಆಗುತ್ತದೆ!' ಅಂದ ಶಿಷ್ಯ.

'ಜ್ಞಾನೋದಯವೂ ಅಷ್ಟೇ. ಅದಾಗೇ ಆಗುತ್ತದೆ. ಬಿಡು,' ಅಂದು ಎದ್ದರು ಗುರುಗಳು.

'ಹಾಗಾದರೆ ಈ ಧ್ಯಾನ, ಜಪ, ಪೂಜೆ, ಪುನಸ್ಕಾರ ಇತ್ಯಾದಿ ಯಾಕೆ?' ಎಂದು ಕೇಳಿದ ಶಿಷ್ಯ.

'ಸೂರ್ಯೋದಯವು ತಂತಾನೇ ಆದರೂ ಅದನ್ನು ನೋಡಬೇಕು ಅಂದರೆ ಅಷ್ಟೊತ್ತಿಗೆ ನಿದ್ದೆಯಿಂದ ಎದ್ದಿರಬೇಕಾಗಿರುತ್ತದೆ. ಅದಕ್ಕಾಗಿ ಗಡಿಯಾರ ಉಪಯೋಗಿಸಬಹುದು. ಹೇಗೆ ಗಡಿಯಾರವು ನಿನ್ನನ್ನು ಸೂರ್ಯೋದಯದ ಸಮಯಕ್ಕೆ ಎಬ್ಬಿಸಿ ಸೂರ್ಯೋದಯವನ್ನು ನೋಡುವಂತೆ ಮಾಡುತ್ತದೆಯೋ ಹಾಗೇ ಅಧ್ಯಾತ್ಮ ಸಾಧನೆಗಳು (ಧ್ಯಾನ, ಜಪ ಇತ್ಯಾದಿ) ನಿನಗೆ ಜ್ಞಾನೋದಯವಾದಾಗ ಅದನ್ನು ತಿಳಿಯಲು ಸಹಾಯಕಾರಿ. ಅಷ್ಟು ಬಿಟ್ಟರೆ ಜಾಸ್ತಿ ಉಪಯೋಗವಿಲ್ಲ. ಜ್ಞಾನೋದಯ ಅದರ ಪಾಡಿಗೆ ಅದಾಗುತ್ತಿರುತ್ತದೆ,' ಎಂದರು ಗುರುಗಳು.

ಮುಲ್ಲಾ ನಸ್ರುದ್ದೀನನ ಕಥೆಯನ್ನು ಉಪಯೋಗಿಸಿ ಅದ್ವೈತದ ಪ್ರಕಾರ ಮುಕ್ತಿಯ (enlightenment) ಸಾರವನ್ನು ಹೇಳಿದವರು ಸ್ವಾಮಿ ಪರಮಾರ್ಥಾನಂದರು. ಅವರಿಗೊಂದು ಹಾಟ್ಸ್ ಆಫ್. Ultimate interpretation! Gist is - there is nothing to do. YOU are already free. But, till you know that you are free, you need to do rituals and practices! That's the paradox and the riddle.

ಬಂಧಿತರಾಗಿಯೇ ಇಲ್ಲವೆಂದ ಮೇಲೆ ಮುಕ್ತಿಯ ಪ್ರಶ್ನೆಯೇ ಬರುವದಿಲ್ಲ. ಬಂಧಿತರಾಗಿದ್ದೇವೆ ಎಂಬ ತಪ್ಪು ತಿಳುವಳಿಕೆಗೆ ಕಾರಣ ಅಜ್ಞಾನ. ಚಂದ್ರ ಭಾವಿಯಲ್ಲಿ ಬಿದ್ದಿದ್ದಾನೆ ಎಂದುಕೊಂಡಂತೆ.

ಇಂತಹ ದೃಷ್ಟಾಂತಗಳನ್ನು (metaphor) ತುಂಬಾ literally ಆಗಿ ತೆಗೆದುಕೊಳ್ಳಬೇಡಿ. ಅವುಗಳ ಉದ್ದೇಶ ಅದಲ್ಲ. ಅವು ಅಂತಿಮ ಜ್ಞಾನದೆಡೆಗಿನ ಮಾರ್ಗಸೂಚಿಗಳು ಅಷ್ಟೇ. ಓದಿದಾಗ 'ಆಹಾ!' ಅನ್ನುವಂತಹ epiphany ತರಹದ್ದು ಆದರೆ ಅವುಗಳ ಉದ್ದೇಶ ಸಾರ್ಥಕ. ಆಗಲಿಲ್ಲ ಅಂದರೆ ನಾವಿನ್ನೂ ಆ ಮಟ್ಟಕ್ಕೆ ಹೋಗಿಲ್ಲ, ಬೌದ್ಧಿಕವಾಗಿ ತಯಾರಾಗಿಲ್ಲ ಎಂದರ್ಥ. ಪ್ರಯತ್ನ ಮುಂದುವರೆಯಲಿ. ಮುಂದೊಮ್ಮೆ ಸರಿಯಾದ ಸಮಯದಲ್ಲಿ ಬರೋಬ್ಬರಿ ಅರ್ಥವಾಗುತ್ತದೆ.

ಮಾಹಿತಿ ಆಧಾರ: The book of ONE by Dennis Waite

**

ಒಮ್ಮೊಮ್ಮೆ ಈ coincidences ಎಷ್ಟು ಮಜವಾಗಿರುತ್ತವೆ ಅಂದರೆ....ಬಿಂಬ ಪ್ರತಿಬಿಂಬಗಳ ಬಗ್ಗೆ ಬರೆದು YouTube ಮೇಲೆ ಕಣ್ಣಾಯಿಸಲು ಹೋದರೆ ಮತ್ತೊಂದು ಅದ್ವೈತದ ದೃಷ್ಟಾಂತ ಅಚಾನಕ್ಕಾಗಿ ಕಣ್ಣಿಗೆ ಬೀಳಬೇಕೇ!?

ಕೆಳಗೆ ಹಾಕಿದ ವಿಡಿಯೋದಲ್ಲಿ ಹಕ್ಕಿಯೊಂದು ಕನ್ನಡಿಯಲ್ಲಿ ತನ್ನದೇ ಪ್ರತಿಬಿಂಬವನ್ನು ಕಂಡು ಹೇಗೆ ವರ್ತಿಸುತ್ತಿದೆ ನೋಡಿ.

ಅದು ತನ್ನದೇ ಪ್ರತಿಬಿಂಬ ಎಂದು ತಿಳಿಯುವಷ್ಟು ಬುದ್ಧಿ ಆ ಹಕ್ಕಿಗೆ ಇಲ್ಲ ಅನ್ನುವ ನಮಗೆಷ್ಟು ಬುದ್ಧಿಯಿದೆ? ಜಗತ್ತೆಂಬುದು ಮಾಯೆ ಎಂಬ ಕನ್ನಡಿಯಲ್ಲಿ ಕಾಣುವ ಭಗವಂತನ ಪ್ರತಿಬಿಂಬ ಅಷ್ಟೇ ಎನ್ನುವ ವಿವೇಕ ನಮಗೂ ಮೂಡುವದೇ ಇಲ್ಲ. ನಾವೂ ಸಹ ಆ ಹಕ್ಕಿಯಂತೆ ಪ್ರತಿಬಿಂಬದೊಂದಿಗೆ (ಜಗತ್ತೆಂಬ ಮಿಥ್ಯೆಯೊಂದಿಗೆ) ಗುದ್ದಾಡುತ್ತಲೇ ಇರುತ್ತೇವೆ. ವ್ಯಾವಹಾರಿಕ ನೆಲೆಗಟ್ಟಿನಲ್ಲಿ ಗುದ್ದಾಟ ಅವಶ್ಯಕವಿರಬಹದು. ಆದರೆ ಜಗತ್ತು, ಅದರೊಂದಿಗಿನ ಗುದ್ದಾಟವೆಲ್ಲ ಪರಮಸತ್ಯ ಎಂದು ತಿಳಿದು ಗುದ್ದಾಡುತ್ತೇವಲ್ಲ ಅದು ಅಜ್ಞಾನ.

ಇದ್ಯಾಕೋ 'ಕರ್ಮಣ್ಯೇ ವಾಧಿಕಾರಸ್ತೇ' ಕಡೆ ಹೊರಟಿತು.... :) ಸಾಕು. ಬೇರೊಂದು ಬ್ಲಾಗ್ ಪೋಸ್ಟಿಗೆ ವಸ್ತು ಬೇಕಲ್ಲ!? :)

ಹಕ್ಕಿಯ ಈ ದೃಷ್ಟಾಂತವನ್ನು ಸ್ವಾಮಿ ಅನುಭವಾನಂದಜೀ ಸದಾ ಹೇಳುತ್ತಿರುತ್ತಾರೆ. ಈ ಹಕ್ಕಿಗೊಂದು ಥ್ಯಾಂಕ್ಸ್! :)

 

Wednesday, October 11, 2017

WHYling away our life HOWling

We while away our life howling.

!! ??

What is that supposed to mean?

While away = waste, spend without purpose.

If you write the same line as 'we WHYle away our life HOWling', it becomes more appropriate. Grammatically incorrect. Perhaps. But very insightful and meaningful.

Our tendency to ask 'why' and 'how' for everything is the root cause of our miseries.

Why and How are very powerful questions and are tremendously helpful to understand things in the material world. But, they are extreme time-wasters if used to ponder over spiritual or metaphysical things.

Why is the world like this? Why does God let this happen? Why so much misery? Why such and a such thing happened to me? Why me????

After we get tired of WHY, we start wasting time on HOW. That's also useless.

Forget WHY and HOW and develop acceptance. You will be happier and more peaceful.


**

All your happiness and miseries are found in the same two things in life - your possessions and your relations.

Happiness is linear and misery is geometric. So be careful where you try to find happiness. You may find some happiness as promised. But, be assured, the same thing will cause many times misery too.

Minimalism is to the rescue. Cut down both possessions and relations. You will be lighter and happier. Why stop at traveling light? Live light!

External clutter causes internal clutter and vice versa. Reducing one helps reduce the other as well.

**

Insights from the discourses of Swami Anubhavananda Saraswati


Sunday, October 08, 2017

ಸಪ್ತಾಪುರದ ಹನುಮಪ್ಪ

ನಿನ್ನೆ ಶನಿವಾರ. ಹನುಮಪ್ಪ ನೆನಪಾಗಿದ್ದ.

'ಯಾವ ಹನುಮಪ್ಪ?' ಅಂತ ಕೇಳಿದರೆ ಹನುಮಂತ, ಮಾರುತಿ, ದೇವರು. ಹನುಮಾನ್, ವಾಯುಪುತ್ರ, ಆಂಜನೇಯ ಅಂತೆಲ್ಲ ಹೇಳಬೇಕಾಗುತ್ತದೆ.

ನಮ್ಮ ಧಾರವಾಡ ಕಡೆ ದೇವರಾದ ಹನುಮಂತನಿಗೆ ಯಾರೂ ಶುದ್ಧವಾಗಿ ಹನುಮಂತ, ಮಾರುತಿ, ವಾಯುಪುತ್ರ, ಅದು ಇದು ಅಂತೆಲ್ಲ ಶಾಸ್ತ್ರಬದ್ಧವಾಗಿ ಹೇಳುವುದು ಬಹಳ ಕಮ್ಮಿ. ಅವನು ದೇವರಾಗಿದ್ದರೂ ಸರಿ. ಅವನು ಹನುಮಪ್ಪನೇ. ಅವನ ದೇವಸ್ಥಾನ ಶಾರ್ಟ್ & ಸ್ವೀಟಾಗಿ 'ಹನುಮಪ್ಪನ ಗುಡಿ'. ಒಂದಕ್ಕಿಂತ ಹೆಚ್ಚು ಹನುಮಪ್ಪನ ಗುಡಿಗಳಿರುವ ಕಾರಣ 'ನುಗ್ಗಿಕೇರಿ ಹನುಮಪ್ಪ', 'ಸಪ್ತಾಪುರ ಹನುಮಪ್ಪ' ಅಂತ ಗ್ರಾಮ / ಬಡಾವಣೆಗಳ prefix ಬೇಕಾದರೆ ಸೇರಿಸುತ್ತಾರೆ. To differentiate between different Hanumpappas.

ದೇವರಾದ ಹನುಮಂತನಿಗೆ ಹನುಮಪ್ಪ ಎನ್ನುವದರಲ್ಲಿ ಅದೇನೋ ಅಪ್ಯಾಯತೆ, ಆತ್ಮೀಯತೆ ಎಲ್ಲ ಇದೆ ಅಂತ ಅನ್ನಿಸುತ್ತದೆ. ಹನುಮಪ್ಪ ಅಂದುಬಿಟ್ಟರೆ ಚಿಕ್ಕಪ್ಪನೋ, ದೊಡ್ಡಪ್ಪನೋ, ಅಪ್ಪಣ್ಣನೋ, ಅಣ್ಣಪ್ಪನೋ ಅನ್ನುವ ಕ್ಲೋಸ್ ಫೀಲಿಂಗ್ ಬರುತ್ತದೆ. ದೇವರು ದಿಂಡರು ಅನ್ನುವ ಔಪಚಾರಿಕತೆಯೆಲ್ಲ ಮಾಯವಾಗಿ ಹನುಮಪ್ಪ ಕೂಡ ನಮ್ಮವನೇ, ಕುಟುಂಬದವನೇ ಆಗಿಬಿಡುತ್ತಾನೆ. ಒಮ್ಮೆ ಹನುಮಪ್ಪ ಕೂಡ ನಮ್ಮವನೇ ಆಗಿಬಿಟ್ಟರೆ 'ಹೋಳಿಗೆ ತುಪ್ಪ, ಹೊಡಿ ಹನುಮಪ್ಪ!' ಅಂತ ದೇವರಿಗೆ ಹೋಳಿಗೆ ತುಪ್ಪದ ನೈವೇದ್ಯ ಮಾಡಿ ನಾವು ಬರೋಬ್ಬರಿ ಬಾರಿಸಲಿಕ್ಕೆ, ಅಂದರೆ ಹೋಳಿಗೆಯನ್ನು ತುಪ್ಪದ ಜೊತೆ ಬಾರಿಸಲಿಕ್ಕೆ, ಮಜಾ ಬರುತ್ತದೆ.

ಅದೇನೋ ಗಾದೆ ಮಾತು ಇದೆಯೆಲ್ಲ. 'ಏನೇ ಆದರೂ ಹನುಮಪ್ಪ ಮಾತ್ರ ಊರ ಹೊರಗೆ...' ಧಾರವಾಡದ ಮಟ್ಟಿಗಂತೂ ಈ ಮಾತು ಸತ್ಯ. ಧಾರವಾಡ ಊರನ್ನು ಯಾವುದೇ ದಿಕ್ಕಿನಿಂದ ಪ್ರವೇಶಿಸಿ, ನಿಮಗೆ ಒಂದು ಹನುಮಪ್ಪನ ಗುಡಿ ಕಾಣುತ್ತದೆ. ಹುಬ್ಬಳ್ಳಿ ಕಡೆಯಿಂದ ಬೈಪಾಸ್ ರಸ್ತೆ ಮೇಲೆ ಬಂದರೆ ವಿಖ್ಯಾತ ನುಗ್ಗಿಕೇರಿ ಹನುಮಪ್ಪನ ಗುಡಿ ಇದೆ. ದೊಡ್ಡ ಕೆರೆಯೊಂದನ್ನು ಹೊಂದಿದ ಅದ್ಭುತ ದೇವಸ್ಥಾನ. ಗೋವಾ, ಹಳಿಯಾಳ ಕಡೆಯಿಂದ ಎಂಟ್ರಿ ಕೊಟ್ಟರೆ ಸಪ್ತಾಪುರ ಹನುಮಪ್ಪ ಕಾವಲಿಗೆ ನಿಂತಿದ್ದಾನೆ. ಕರ್ನಾಟಕ ವಿಶ್ವವಿದ್ಯಾಲಯದ ಪ್ರವೇಶದ್ವಾರದ ಪಕ್ಕದಲ್ಲೇ ಇದೆ ಸಪ್ತಾಪುರ ಹನುಮಪ್ಪನ ಗುಡಿ. ಬೇರೆ ಬೇರೆ ದಿಕ್ಕಿನಿಂದ ಪ್ರವೇಶ ಮಾಡಿದರೂ ಹನುಮಪ್ಪನ ಗುಡಿ ಇರಲೇಬೇಕು. ಧಾರವಾಡದಲ್ಲಿ ಮಾರಿಗೊಬ್ಬ ಹನುಮಪ್ಪ ಇರುತ್ತಾನೆ. ಖಾಲಿ ಜಾಗಗಳ ಅತಿಕ್ರಮಣ ಮಾಡುವವರಿಗೂ ಹನುಮಪ್ಪ ಆರಾಧ್ಯದೈವ. ಎರಡು ಇಟ್ಟಿಗೆ ಇಟ್ಟು, ಒಳಗೊಂದು ಕಲ್ಲಿಗೆ ಕೆಂಪನೆಯ ಬಣ್ಣ ಬಳಿದು, 'ಇದು ಹನುಮಪ್ಪನ ಗುಡಿ!' ಅಂದುಬಿಟ್ಟರೆ ಮುಗಿಯಿತು. ಆಜನ್ಮ ಬ್ರಹ್ಮಚಾರಿಯಾದ ಹನುಮಪ್ಪ ಹೆಚ್ಚಿನ ಡಿಮ್ಯಾಂಡ್ ಮಾಡುವದಿಲ್ಲ. ಬಂದು ಕೂತುಬಿಡುತ್ತಾನೆ. ಅಲ್ಲಿಗೆ ಗುಡಿ ರೆಡಿ. ಹನುಮಪ್ಪ ಬಂದು ಕೂತ ಅಂದರೆ ಮುಗಿಯಿತು. ಸರ್ಕಾರಿ ಜಾಗ, ಖಾಸಗಿ ಜಾಗದ ಆಸೆ ಕೈಬಿಟ್ಟಂತೆಯೇ. ಹೀಗೆ ಹನುಮಪ್ಪನ ಹೆಸರಿನಲ್ಲಿ ಜಾಗದ ಅತಿಕ್ರಮಣ ಮಾಡಿದವರು ಒಮ್ಮೆ ಆ ಜಾಗದ ಕಬ್ಜಾ ಸಿಕ್ಕ ನಂತರ ಅದನ್ನು ಲೇಔಟ್ ಮಾಡಿ ಪರಭಾರೆ ಮಾಡುವಾಗ ಹನುಮಪ್ಪನಿಗೆ ಹೋಳಿಗೆ ನೈವೇದ್ಯ ಮಾಡಿ ಅವನನ್ನು ಅಲ್ಲಿಂದ ಒಕ್ಕಲೆಬ್ಬಿಸುತ್ತಾರೆ. ಮತ್ತೊಂದು ಜಾಗದ ಅತಿಕ್ರಮಣಕ್ಕೆ ಈ ಹನುಮಪ್ಪನ ವರ್ಗವಾಗುತ್ತದೆ. ಬ್ರಹ್ಮಚಾರಿ ಹನುಮಪ್ಪ ಹೀಗೆ ಸಂಸಾರಿಗಳ ಕಾರಸ್ಥಾನಕ್ಕೆ ಬಲಿಯಾಗುತ್ತಾನೆ.

ಈ ಸಪ್ತಾಪುರ ಹನುಮಪ್ಪ ನಮಗೆ ತುಂಬಾ ಹತ್ತಿರದವನು. ಮನೆ ಹತ್ತಿರಕ್ಕೇ ಇರುವ ಕಾರಣಕ್ಕೆ ಹತ್ತಿರದವನು. ಮನೆ ಹತ್ತಿರವೇ ಇರುವ ಕರ್ನಾಟಕ ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಲ್ಲಿ ನಾವು ಓಡಾಡಿಕೊಂಡಿರುವದರಿಂದ ಸದಾ ಕಣ್ಣಿಗೆ ಬೀಳುತ್ತಾನೆ. ದೂರದಿಂದಲೇ ನಮಸ್ಕಾರ ಹಾಕುತ್ತೇವೆ. ಹನುಮಪ್ಪ ತುಂಬಾ informal ದೇವರು. ದೂರದಿಂದಲೇ casual ನಮಸ್ಕಾರ ಹಾಕಿದರೂ ಅನುಗ್ರಹಿಸುತ್ತಲೇ ಇರುತ್ತಾನೆ. ಒಳಗೆ ಹೋಗಿ ಬರೋಣ ಅಂದರೆ ಮುಂಜಾನೆ ವಾಕಿಂಗಿಗೆ ಹೋದಾಗಲೇ ಹನುಮಪ್ಪನ ದರ್ಶನವಾಗುವದು ಹೆಚ್ಚು. ಆಗ ಇನ್ನು ಸ್ನಾನ ಇತ್ಯಾದಿ ಆಗಿರುವದಿಲ್ಲ. ಮತ್ತೆ ಬೂಟು ಕಳಚಿಟ್ಟು ಒಳಗೆ ಹೋದರೆ ಬಂದಾಗ ಅವು ಅಲ್ಲೇ ಇರುತ್ತವೆಯೇ? ಖಾತ್ರಿಯಿಲ್ಲ. ಹೀಗಾಗಿ ಸಪ್ತಾಪುರದ ಹನುಮಪ್ಪನ ಗುಡಿಯ ಮುಂದೆ ದಿನಾ ಬೆಳಿಗ್ಗೆ ವಾಕಿಂಗ್ ಮಾಡಿದರೂ ಒಳಗೆ ಹೋಗಿದ್ದು ಯಾವ ಕಾಲದಲ್ಲೋ. ತುಂಬಾ ವರ್ಷಗಳಾಗಿಹೋಗಿವೆ.

ಸಪ್ತಾಪುರದ ಹನುಮಪ್ಪ ಎಂಬ ದೇವರ ಗುಡಿಯ ಹೆಸರು ಮನಸಲ್ಲಿ ನಿಂತ ಘಳಿಗೆ ಬರೋಬ್ಬರಿ ನೆನಪಿದೆ. ಸರಿಸುಮಾರು ನಲವತ್ತೂ ಚಿಲ್ಲರೆ ವರ್ಷಗಳ ಹಿಂದೆ. ಆಗಿನ್ನೂ ನಾಲ್ಕೈದು ವರ್ಷದ ಚಿಣ್ಣ ಬಾಲಕ ನಾನು. ಮನೆಯಿದ್ದದ್ದು ಧಾರವಾಡದ ಮಾಳಮಡ್ಡಿ ಬಡಾವಣೆಯಲ್ಲಿ. ರಾಯರ ಮಠದ ಸಮೀಪ. ಯಾವದೋ ಕಾರಣಕ್ಕೆ ಆವತ್ತು ಅಮ್ಮನ ಜೊತೆ ರೈಲ್ವೆ ಸ್ಟೇಷನ್ ಆಕಡೆಯಿರುವ ಕಲ್ಯಾಣ ನಗರ ಬಡಾವಣೆಗೆ ಹೋಗಿದ್ದೆ. ಅಮ್ಮನ ಕೆಲವು ಆತ್ಮೀಯರು ಆರನೇ ಕ್ರಾಸಿನ ಆಸುಪಾಸಿನಲ್ಲಿ ಇದ್ದರಲ್ಲ. ಹಾಗಾಗಿ ಆಗಾಗ ಅಮ್ಮನ ಸವಾರಿ ಆಕಡೆ ಹೋಗುತ್ತಿತ್ತು. ಜೊತೆಗೆ ನಾನೂ ಹೋಗುತ್ತಿದ್ದೆ.

ಅಂದೂ ಹಾಗೇ ಆಯಿತು. ಅಮ್ಮನ ಗೆಳತಿಯರ ಮನೆಯಲ್ಲಿ ಹರಟೆ ಪರಟೆ ಮುಗಿಸಿ, ಚಹಾ ಪಹಾ ಕುಡಿದು, ಮನೆ ಕಡೆ ಹೊರಟೆವು. ಸಂಜೆ ಸುಮಾರು ಏಳು ಏಳೂವರೆ ಸಮಯ. ಆಗಲೇ ಕತ್ತಲಾವರಿಸತೊಡಗಿತ್ತು. ಆಗ ಕಲ್ಯಾಣ ನಗರ ಎಂಬ ಬಡಾವಣೆಯಲ್ಲಿ ಜನವಸತಿ ತುಂಬಾ ವಿರಳ. ಬಡಾವಣೆ ಕಮ್ಮಿ ಮಾವಿನತೋಪು ಜಾಸ್ತಿಯಾಗಿತ್ತು ಅಂದರೆ ಬರೋಬ್ಬರಿಯಾದೀತು. ಕತ್ತಲಾಯಿತೆಂದರೆ ಒಂದು ತರಹದ ರಾವ್ ರಾವ್ ಫೀಲಿಂಗ್. ಮತ್ತೆ ಪಕ್ಕದಲ್ಲೇ ಹರಿದು ಹೋಗಿದ್ದ ರೈಲ್ವೆ ಹಳಿಗಳ ಮೇಲೆ ಆಗಾಗ ಹೆಣಗಳು ಬೀಳುತ್ತಿದ್ದವು. ಆತ್ಮಹತ್ಯೆ ಕೇಸುಗಳು. ಕೊಲೆ ಮಾಡಿ ಎಸೆದು ಹೋದ ಕೇಸುಗಳೂ ಸಹ ಇರುತ್ತಿದ್ದವು ಅಂತ ಜನ ಮಾತಾಡಿಕೊಳ್ಳುತ್ತಿದ್ದರು.

ಕತ್ತಲಾಗುತ್ತಿದೆ ಬೇಗ ಮನೆ ಸೇರಿಕೊಳ್ಳೋಣ ಅಂತ ಮನೆ ಕಡೆ ಹೊರಟರೆ ಕಲ್ಯಾಣ ನಗರದ ಐದನೇಯ ಅಥವಾ ನಾಲ್ಕನೇಯ ಕ್ರಾಸಿನಲ್ಲಿ ಅಮ್ಮನನ್ನು ಯಾರೋ ಒಬ್ಬರು ಅಟಕಾಯಿಸಿಕೊಂಡರು. ನೋಡಲು ಸ್ವಲ್ಪ ಅಜ್ಜಿಯ ಹಾಗಿದ್ದರು. ಮೊದಲೆಲ್ಲೂ ನೋಡಿದ ನೆನಪಿರಲಿಲ್ಲ.

ಸ್ವಲ್ಪ ದೂರದಲ್ಲಿದ್ದರೂ, ಅಮ್ಮನನ್ನು ನೋಡಿದವರೇ, 'ಏ, ಲಲಿತಾ.......!!' ಎಂದು ವಿಚಿತ್ರವಾಗಿ ಕೂಗುತ್ತ ಓಡಿ ಬಂದು ಅಮ್ಮನ ಕೈಹಿಡಿದುಕೊಂಡರು. ನಾನು ಥಂಡಾ ಹೊಡೆದೆ ಒಂದು ಕ್ಷಣ. ಅಷ್ಟು ವಿಚಿತ್ರವಾಗಿತ್ತು ಆಕೆ ಕೂಗುತ್ತ ಓಡಿ ಬಂದಿದ್ದು.

'ನಿನ್ನ ಗೆಳತಿ ಹೋದಳಲ್ಲವಾ. ನಮ್ಮನ್ನೆಲ್ಲಾ ಬಿಟ್ಟು ಹೋಗಿಬಿಟ್ಟಳಲ್ಲವಾ..... ' ಎಂದವರೇ ಭೋರಿಟ್ಟು ಅಳಲು ಆರಂಭಿಸಿಬಿಟ್ಟರು. ಆ ಮಾತು ಕೇಳಿ ಈಗ ಅಮ್ಮ ಕೂಡಾ ಥಂಡಾ ಹೊಡೆದರು.

'ಏನಾತ್ರೀ? ಏನು ಹೇಳಲಿಕತ್ತೀರಿ? ಯಾರಿಗೆ ಏನಾತು?' ಎಂದು ಅಮ್ಮ ಆ ಅಜ್ಜಿಯಂತವರನ್ನು ಕೇಳಿದಳು.

'ನಿನ್ನ ಗೆಳತಿ ಜೀವಾ ತೆಕ್ಕೊಂಡಳು! ವಾರದ ಹಿಂದೆ ಸಪ್ತಾಪುರ ಹನುಮಪ್ಪನ ಗುಡಿ ಭಾವಿಯಾಗ ಜಿಗಿದು ಸತ್ತಳು!' ಅಂದವರೇ, 'ನಮ್ಮನ್ನೆಲ್ಲಾ ಬಿಟ್ಟು ಹೋಗಿಬಿಟ್ಟಳು. ನೋಡ. ಹೀಂಗ ಮಾಡೋದು!? ಅನ್ಯಾಯ. ನೋಡss....' ಅನ್ನುತ್ತ ಮತ್ತೂ ಭೋರಿಟ್ಟು ಅಳತೊಡಗಿದರು.

ಮುಸ್ಸಂಜೆ ಸಮಯ. ನಿರ್ಜನ ಬಡಾವಣೆ. ದೀಪವಿಲ್ಲದ ರಸ್ತೆಗಳು. ಮಾಹೋಲ್ ಖರಾಬಾಗಿದೆ. ಹಾಗಿರುವಾಗ ಬಿಳಿ ಮಂಡೆಯ ವೃದ್ಧೆಯೊಬ್ಬರು ಒಮ್ಮೆಲೇ ಪ್ರತ್ಯಕ್ಷರಾಗಿ ಅವರ ಮಗಳು, ಅಮ್ಮನ ಗೆಳತಿ, ವಾರದ ಹಿಂದೆಯಷ್ಟೇ ಸಪ್ತಾಪುರದ ಹನುಮಪ್ಪನ ಗುಡಿಯೊಳಗಿನ ಭಾವಿಯೊಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಳು ಅನ್ನುವ ಭಯಾನಕ ಸುದ್ದಿ ಹೇಳಿ ನಮ್ಮನ್ನು ಫುಲ್ ಥಂಡಾ ಹೊಡೆಸಿಬಿಟ್ಟಿದ್ದಾರೆ!

ನನಗೆ ಆಗ ಪೂರ್ತಿಯಾಗಿ ಅರ್ಥವೂ ಆಗಿರಲಿಲ್ಲ. ಆ ವೃದ್ಧೆಯ ಹರಕತ್ತನ್ನು ನೋಡಿ ಥಂಡಾ ಹೊಡೆದು ಅಮ್ಮನ ಹಿಂದೆ ಬಚ್ಚಿಟ್ಟುಕೊಂಡೆ. ಮೊದಲೇ ಸಂಕೋಚದ ಮುದ್ದೆ ನಾನು. ಪ್ರೀತಿಯಿಂದ ಮಾತಾಡಿಸಿದರೂ ಮುದುಡಿ ಹೋಗುತ್ತಿದ್ದೆ. ಇನ್ನು ರೋನಾ ಧೋನಾ ಮಾಡುತ್ತಿರುವ ಆ ಮುದುಕಿ ಬಂದು ನನಗೂ ಗುದುಮುರುಗಿ ಹಾಕಿದರೆ ಕಷ್ಟ. ಅಷ್ಟೇ ಮತ್ತೆ ಅಂತ ಅಮ್ಮನ ಹಿಂದೆ ಸೇರಿಕೊಂಡೆ.

'ಅಯ್ಯೋ! ಇದೇನಾತ್ರಿ? ಏನಾಗಿತ್ತು ಅಕಿಗೆ? ಅದೂ ಭಾವಿಯಾಗ ಜಿಗಿದು ಸಾಯೋವಂತಹದ್ದು?' ಎಂದು ಅಮ್ಮ ತನ್ನ ಗೆಳತಿಯ ಅಚಾನಕ್ ಸಾವಿನ ಸುದ್ದಿಯಿಂದಾದ ಆಘಾತದಿಂದ ಕೊಂಚ ಚೇತರಿಸಿಕೊಂಡು ಕೇಳಿದಳು.

ಅಮ್ಮ ಮತ್ತು ಆ ವೃದ್ಧೆ ಏನೇನೋ ಗುಸುಗುಸು ಮಾತಾಡಿಕೊಂಡರು. ಆಗ ಏನು ಅಂತ ತಿಳಿಯಲಿಲ್ಲ. ಎಷ್ಟೋ ವರ್ಷಗಳ ನಂತರ ಒಂದಕ್ಕೊಂದು ಮಾಹಿತಿ ಸೇರಿಸಿಕೊಂಡು, ಸ್ವಲ್ಪ ಮಟ್ಟಿಗೆ ಬೆಳೆದ ಬುದ್ಧಿಯನ್ನು ಉಪಯೋಗಿಸಿದಾಗ ತಿಳಿದ ವಿಷಯ ಇಷ್ಟು. ಆಕೆ ಅಮ್ಮನ  ಗೆಳತಿ. ಆಗ ಸುಮಾರು ಮೂವತ್ತು-ಮೂವತ್ತೆರೆಡು ವರ್ಷದ ಅವಿವಾಹಿತೆ. ಲವ್ ಕೇಸು. ಮೊದಲು ಲವ್ವಾಗಿದ್ದು ನಂತರ ಲವ್ ಫೇಲ್ಯೂರ್ ಆಗಿದೆ. ಸೀದಾ ಹೋಗಿ ಸಪ್ತಾಪುರದ ಹನುಮಪ್ಪನ ಗುಡಿಯ ಆವರಣದೊಳಗಿರುವ ಭಾವಿಯೊಳಗೆ ಡೈವ್ ಹೊಡೆದಿದ್ದಾಳೆ. ಶಿವಾಯ ನಮಃ!

ಪುತ್ರ / ಪುತ್ರಿ ಶೋಕಂ ನಿರಂತರಂ. ಮಗಳನ್ನು ಕಳೆದುಕೊಂಡು ಸಂಕಟ ಪಡುತ್ತಿದ್ದ ಆ ವೃದ್ಧ ತಾಯಿಗೆ ಏನೋ ಒಂದು ತರಹದ ಸಮಾಧಾನವನ್ನು ಅಮ್ಮ ಹೇಳಿದಳು. ಸ್ವಂತ ಮಗಳೇನೋ ಎಂಬಂತೆ ಅವರ ಮೈ ಕೈ ಒತ್ತಿ, ಆತ್ಮೀಯತೆ ಮತ್ತು ಪ್ರೀತಿ ತೋರಿದಳು. ಆ ವೃದ್ಧೆ ಅದೆಷ್ಟೋ ನಿರಾಳರಾದಂತೆ ಕಂಡುಬಂತು. ಅವರನ್ನು ಬೀಳ್ಕೊಟ್ಟು ಮನೆ ಕಡೆ ಹೊರಟೆವು. ಆಗ ಆ ತಾಯಿ ಹೇಳಿದ ಒಂದು ಮಾತೇ ಕಾರಣ ಇವತ್ತಿಗೂ ಸಪ್ತಾಪುರದ ಹನುಮಪ್ಪ, ಅವನ ಗುಡಿ, ಅಲ್ಲಿರಬಹುದಾದ ಭಾವಿ ಎಲ್ಲ ಮನಸ್ಸಿನಲ್ಲಿ ಅಚ್ಚೊತ್ತಿ ನಿಂತಿದೆ.

ಕಲ್ಯಾಣ ನಗರದ ಐದು ಅಥವಾ ನಾಲ್ಕನೇ ಕ್ರಾಸಿನಲ್ಲಿ ನಿಂತಿದ್ದ ಆ ವೃದ್ಧ ತಾಯಿ, ತಮ್ಮ ಬಲಗೈನ್ನು ಎತ್ತಿ ತೋರಿಸಿ ಒಂದು ಮಾತು ಹೇಳಿದರು. 'ಆ ದಿಕ್ಕಿನ್ಯಾಗ, ಸಪ್ತಾಪುರದ ಹನುಮಪ್ಪನ ಗುಡಿ ದಿಕ್ಕಿನ್ಯಾಗ ನೋಡಲಿಕ್ಕೆ ಆಗೋದಿಲ್ಲ ನೋಡವಾ. ಆ ದಿಕ್ಕಿನ್ಯಾಗ ತಲಿ ಎತ್ತಿದರೂ ನಿನ್ನ ಗೆಳತಿಯದೇ ನೆನಪಾಗಿ ಹೊಟ್ಯಾಗ ಇಂತಾ ಸಂಕಟಾ ಅಂದ್ರ ಅಂತಾ ಸಂಕಟ! ಯಾರಿಗೂ ಬ್ಯಾಡವಾ ಈ ಸಂಕಟ! ಯಾರಿಗೂ ಬ್ಯಾಡವಾ! ನಾ ನಂಬಿದ ದೇವರು ಹನುಮಪ್ಪ ಕೂಡ ಅಕಿನ್ನ ಬಚಾವ್ ಮಾಡಲಿಲ್ಲ. ಇಕಿನೂ ಅಷ್ಟೇ. ಹೋಗಿ ಹೋಗಿ ಹನುಮಪ್ಪನ ಗುಡಿ ಭಾವಿಯಾಗss ಜಿಗಿದು ಸಾಯಬೇಕಾ?..... ' ಅನ್ನುತ್ತ ಅಳುತ್ತಲೇ ಹೋಗಿಬಿಟ್ಟರು.

ಬಾಲ್ಯದಲ್ಲಾದ ಈ intense encounter ರೇ ಕಾರಣ ಸಪ್ತಾಪುರದ ಹನುಮಪ್ಪ ಮನಸ್ಸಿನಲ್ಲಿ ಉಳಿಯಲಿಕ್ಕೆ.

ನೋಡಿದರೆ ಹನುಮಪ್ಪ ಬ್ರಹ್ಮಚಾರಿ ದೇವರು. ಈ ಲವ್ ಫೇಲ್ಯೂರ್ ಗಿರಾಕಿಗಳು ಹೋಗಿ ಅವನ ಭಾವಿಗೆ ಬೀಳುವದ್ಯಾಕೆ? ಗೊತ್ತಿಲ್ಲ.

ಆಗಿನ ಕಾಲದಲ್ಲಿ ಧಾರವಾಡದಲ್ಲಿ ಭಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವದು ಸಾಮಾನ್ಯವಾಗಿತ್ತು. ಪ್ರತಿಯೊಂದು ಕಂಪೌಂಡಿನಲ್ಲೂ ದೊಡ್ಡ ದೊಡ್ಡ ಭಾವಿಗಳಿರುತ್ತಿದ್ದವು. ಅವುಗಳಲ್ಲಿ ಜಿಗಿದು ಸೀದಾ ಮೇಲೆ ಹೋದ ಮಂದಿಯ precedence ಇರುತ್ತಿತ್ತು. ಹಾಗಾಗಿ ಕೊಂಚ ಹೆಚ್ಚು ಕಮ್ಮಿಯಾಗಿ ತಲೆ ಕೆಟ್ಟರೆ ಮುಗಿಯಿತು. ಹಿಂದೆ ಮುಂದೆ ವಿಚಾರ ಮಾಡದೇ ಹೋಗಿ ಜಿಗಿದೇ ಬಿಡುತ್ತಿದ್ದರು. ಮತ್ತೊಂದು ಆತ್ಮಹತ್ಯೆ ಕೇಸ್ ರಿಜಿಸ್ಟರ್ ಆಗುತ್ತಿತ್ತು. ಆ ಭಾವಿಯ ಬಗ್ಗೆ ಒಂದು ತರಹದ ಹೆದರಿಕೆ, ನಿಗೂಢತೆ ಮೂಡುತ್ತಿತ್ತು. ಏನೇನೋ ದಂತಕಥೆಗಳು ಬೆಳೆಯುತ್ತಿದ್ದವು.

ಅಮ್ಮನ ಗೆಳತಿಯ ಆತ್ಮಹತ್ಯೆಯ ಹಿಂದಿನ ಪೂರ್ತಿ ಕಹಾನಿ ಗೊತ್ತಾಗಲಿಲ್ಲ. ಲವ್ ಫೇಲ್ಯೂರ್ ಕೇಸ್ ಅಂತ ಅಷ್ಟೇ ಗೊತ್ತಾಗಿದ್ದು. ಎಲ್ಲಿ ಆ ಪುಣ್ಯಾತ್ಗಿತ್ತಿ ಬಸುರಾಗಿಬಿಟ್ಟಿದ್ದಳೇ? ಆಗಿನ ಕಾಲದಲ್ಲಿ ಪ್ರೇಮಿಗಳಿಗೆ ಕಳ್ಳ ಬಸುರೇ ದೊಡ್ಡ ಪ್ರಾಬ್ಲಮ್. ಲವ್ ಹೇಗೋ ಆಗಿಬಿಡುತ್ತಿತ್ತು. ಎಲ್ಲೋ ಕತ್ತಲ ಜಾಗ ಹುಡುಕಿಕೊಂಡು ಮಿಲನಮಹೋತ್ಸವ ಕೂಡ ಆಚರಿಸಿಕೊಂಡು ಜಿಸ್ಮಿನ ಗರ್ಮಿ ಕೂಡ ಕಮ್ಮಿ ಮಾಡಿಕೊಳ್ಳುತ್ತಿದ್ದರು. ಆದರೆ ಆಗ ಈಗಿನಂತೆ ನಾಲ್ಕಾಣೆಗೆ ಮೂರು ನಿರೋಧ ಸಿಗುತ್ತಿರಲಿಲ್ಲ. ಮಾಲಾ-ಡಿ ಅಂದರೆ ಏನೂಂತ ಗೊತ್ತಿರಲಿಲ್ಲ. morning after pill ಮಾತ್ರೆಯ ಆವಿಷ್ಕಾರ ಕೂಡ ಆಗಿರಲಿಲ್ಲ. ಹಾಗಾಗಿ ಕಾಮದ ಕಾರ್ನಾಮೆಯ ನಂತರ ಸಹಜವಾಗಿ ಬಸಿರು ಕಟ್ಟುತ್ತಿತ್ತು. ಗಟ್ಟಿಗಿತ್ತಿಯರು ಏನೋ ಜುಗಾಡ್ ಮಾಡುತ್ತಿದ್ದರು. ಹೊಟ್ಟೆ ಮುಂದೆ ಬರಲು ಕಾರಣನಾದ ಭಾಡ್ಕೋ ಗಂಡಿನ ಜುಟ್ಟು ಹಿಡಿದು ಎಳೆದುಕೊಂಡು ಬಂದು ತಾಳಿ ಕಟ್ಟಿಸಿಕೊಳ್ಳುತ್ತಿದರು. ಮದುವೆಯಾದ ಆರೇಳು ತಿಂಗಳಲ್ಲೇ 'ಏಳರಾಗ ಹುಟ್ಟಿದ' ಸ್ಪೆಷಲ್ ಕೂಸುಗಳನ್ನು ಹಡೆದು ನಿಟ್ಟುಸಿರು ಬಿಡುತ್ತಿದ್ದರು. ಇಷ್ಟು ಮಾಡುವ ತಾಕತ್ತು, ಕಾಬೀಲೀಯತ್ತು ಇಲ್ಲದವರು ಕೆರೆ ಭಾವಿ ನೋಡಿಕೊಳ್ಳುತ್ತಿದ್ದರು. ಆದರೆ ಹೋಗಿ ಹೋಗಿ, ಸಂಸಾರಕ್ಕೆ ಸಂಬಂಧವೇ ಇಲ್ಲದ ಬ್ರಹ್ಮಚಾರಿ ಹನುಮಂತ ದೇವರ ಗುಡಿಯ ಭಾವಿಗೆ ಡೈವ್ ಹೊಡೆದ ಮೊದಲ ಗಿರಾಕಿ ಅಮ್ಮನ ಗೆಳತಿಯೇ ಇರಬೇಕು. ತಾನು ಬ್ರಹ್ಮಚಾರಿಯಾದರೂ ಸಂಸಾರಿಗಳ ಕಾಟ ತಪ್ಪದು ನೋಡಿ ಹನುಮಪ್ಪನಿಗೆ!

'ಆ ದಿಕ್ಕಿನ ಕಡೆ ನೋಡಲಿಕ್ಕೆ ಆಗೋದಿಲ್ಲ ನೋಡವಾ. ನೋಡಿದರೆ ಸಪ್ತಾಪುರದ ಹನುಮಪ್ಪನ ಗುಡಿಯ ಗೋಪುರ ಕಾಣಿಸ್ತದ. ಅದೇ ಗುಡಿಯ ಭಾವಿಯಾಗ ಜಿಗಿದು ನಿನ್ನ ಗೆಳತಿ ಸತ್ತಳು ನೋಡವಾ.....' ಅನ್ನುವ ಆ ಮಾತೆಯ ಪುತ್ರಿಶೋಕದ ಸಂಕಟದ ವೇದನೆ ಕಿವಿಯಲ್ಲಿ ಗುಂಯ್ಗುಡುತ್ತದೆ. ಹೀಗಾಗಿ ಸಪ್ತಾಪುರದ ಹನುಮಪ್ಪ ನೆನಪಾಗುತ್ತಲೇ ಇರುತ್ತಾನೆ. ನೆನಪಾದಾಗೊಮ್ಮೆ ಮನದಲ್ಲೇ ನೆನೆಯುತ್ತೇನೆ. ಇಲ್ಲಿಯವರೆಗೆ ಹನುಮಪ್ಪನ ಆಶೀರ್ವಾದ, ಕಾರುಣ್ಯ ಸಾಕಷ್ಟಿದೆ. ಮುಂದೂ ಇರಲಿ. ಎಲ್ಲರಿಗೂ ಸಪ್ತಾಪುರದ ಹನುಮಪ್ಪ ಒಳ್ಳೆಯದನ್ನೇ ಮಾಡಲಿ.

Saturday, October 07, 2017

ಜನಕನ ಸಂದೇಹ

ರಾತ್ರಿ ಮಲಗಿದ್ದಾಗ ಜನಕ ಮಹಾರಾಜನಿಗೆ ಕನಸೊಂದು ಬಿತ್ತು. ಕನಸಿನಲ್ಲಿ ಜನಕ ಮಹಾರಾಜ ಭಿಕ್ಷುಕನಾಗಿಬಿಟ್ಟಿದ್ದ! ಆ ದುಃಸ್ವಪ್ನ ಜನಕ ಮಹಾರಾಜನನ್ನು ನಿದ್ದೆಯಿಂದ ಬಡಿದೆಬ್ಬಿಸಿತು. ಬೆಚ್ಚಿಬಿದ್ದು ಎದ್ದು ನೋಡಿದರೆ ಕೇವಲ ಕನಸು. ಜನಕ ಮಹಾರಾಜ ಎಂದಿನಂತೆ ಮಹಾರಾಜನಾಗಿಯೇ ಇದ್ದ. ಭವ್ಯ ಅರಮನೆಯಲ್ಲಿ ಮೆತ್ತನೆಯ ಹಾಸಿಗೆಯ ಮೇಲೆಯೇ ಮಲಗಿದ್ದ. ಸೇವಕರು, ಪರಿಚಾರಕರು ಎಲ್ಲ ಇದ್ದರು. ರಾಜೋಪಚಾರವೆಲ್ಲ ಯಥಾವತ್ತಾಗಿ ನಡೆಯುತ್ತಲೇ ಇತ್ತು.

ಯಾರೋ ಬೇರೆಯವರಾಗಿದ್ದರೆ 'ಅಯ್ಯೋ! ಅದೊಂದು ಕನಸು ಅಷ್ಟೇ. ಕನಸಿನಲ್ಲಿ ಭಿಕ್ಷುಕನಾಗಿದ್ದೆ. ವಾಸ್ತವದಲ್ಲಿ ರಾಜನಾಗಿಯೇ ಇದ್ದೇನೆ. ಆಕಸ್ಮಾತ ಬಿದ್ದ ಕನಸಿನ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ,' ಎಂದು ಸುಮ್ಮನಾಗುತ್ತಿದ್ದರೋ ಏನೋ.

ಆದರೆ ಅವನು ಜನಕ ಮಹಾರಾಜ. ದೊಡ್ಡ ಜಿಜ್ಞಾಸು. ಸಾಕಷ್ಟು ಅಧ್ಯಾತ್ಮ ಓದಿಕೊಂಡಿದ್ದ. ಸಾಧನೆ ಮಾಡಿದ್ದ. ರಾಜರ್ಷಿ ಅನ್ನಿಸಿಕೊಂಡಿದ್ದ. ಹಾಗಾಗಿ ಜನಕ ವಿಚಾರ ಮಾಡಿದ - 'ನಾನು ಯಾರು? ನಿಜವಾಗಿಯೂ ಮಹಾರಾಜನಾಗಿದ್ದವನು ಭಿಕ್ಷುಕನ ಕನಸನ್ನು ಕಂಡೆನೋ? ಅಥವಾ ನಿಜವಾಗಿಯೂ ಭಿಕ್ಷುಕನಾಗಿದ್ದವನು ಈಗ ಮಹಾರಾಜನ ಕನಸನ್ನು ಕಾಣುತ್ತಿದ್ದೆನೋ?'

ರಾಜನೋ ಅಥವಾ ಭಿಕ್ಷುಕನೋ ಎನ್ನುವ ಸಂದೇಹ ಬಗೆಹರಿಯಲೇ ಇಲ್ಲ. ಆಸ್ಥಾನದ ಪಂಡಿತರನ್ನು ಕೇಳಿದ. ಇತರೆ ಗುರುಹಿರಿಯರನ್ನು ಕೇಳಿದ. ಎಲ್ಲರೂ ಒಂದೇ ಮಾತು ಹೇಳಿದರು - 'ಮಹಾರಾಜಾ, ಸಂಶಯವೇ ಬೇಡ. ನೀವು ನಿಜವಾಗಿಯೂ ಮಹಾರಾಜರೇ. ಎಂದೋ ಬಿದ್ದ ಕನಸಿನಲ್ಲಿ ಭಿಕ್ಷುಕನಾಗಿ ಕಂಡ ಮಾತ್ರಕ್ಕೆ ಇಷ್ಟ್ಯಾಕೆ ಚಿಂತೆ ಮಾಡುತ್ತಿದ್ದೀರಿ ಎಂದು ನಮಗೆ ತಿಳಿಯದಾಗಿದೆ. ನಿಮ್ಮ ರಾಜ್ಯ, ನಿಮ್ಮ ಸಂಪತ್ತು, ನಿಮ್ಮ ವೈಭವ ಎಲ್ಲ ಇದ್ದಹಾಗೇ ಇರುವದು ತಮಗೇ ಕಾಣುತ್ತಿದೆಯಲ್ಲವೇ? ಯಾಕೆ ಚಿಂತೆ ಮಹಾಸ್ವಾಮಿ? ತಾವು ಜನಕ ಮಹಾರಾಜರೇ. ಚಿಂತೆ ಬಿಡಿ. ಮೊದಲಿನಂತೆ ರಾಜಕಾರ್ಯಗಳಲ್ಲಿ ತಲ್ಲೀನರಾಗಿ ರಾಜ್ಯಭಾರ ಮಾಡಿ,' ಎಂದರು.

ಆದರೂ ಜನಕನಿಗೆ ಸಮಾಧಾನವಾಗಲಿಲ್ಲ. ತುಂಬಾ ಓದಿಕೊಂಡ ಜ್ಞಾನಿಯಾಗಿದ್ದ ನೋಡಿ. ಸದಾ ಕೊರೆಯುತ್ತಿದ್ದುದು ಒಂದೇ ಪ್ರಶ್ನೆ. 'ನಾನು ಯಾರು? ರಾಜನೋ ಅಥವಾ ಭಿಕ್ಷುಕನೋ? ರಾಜನಾಗಿದ್ದುಕೊಂಡು ಭಿಕ್ಷುಕನ ಕನಸನನ್ನು ಕಂಡೆನೋ? ಅಥವಾ ನಿಜವಾಗಿ ಭಿಕ್ಷುಕನಾಗಿದ್ದುಕೊಂಡು ರಾಜನ ಕನಸನ್ನು ಕಾಣುತ್ತಿರುವೆನೋ? ನಾನು ಅಸಲಿನಲ್ಲಿ ಯಾರು??'

ಜನಕನ ಸಂದೇಹವನ್ನು ತುಂಬಾ ದಿನಗಳ ಬಳಿಕ ಅಷ್ಟಾವಕ್ರನೆಂಬ ಮಹಾಜ್ಞಾನಿಯೊಬ್ಬ ಪರಿಹರಿಸಿದ. ಅಷ್ಟಾವಕ್ರ ಕೊಟ್ಟ ಉತ್ತರ ಗುರಿಯನ್ನು ಸರಿಯಾಗಿ ಮುಟ್ಟಿದ ಬಾಣದಂತಿತ್ತು. ಜನಕನ ಸಂದೇಹದ ಮೂಲವನ್ನೇ ಕಿತ್ತೆಸೆಯಿತು. ಜನಕನಿಗೆ ತಾನು ಯಾರೆಂದು ತಿಳಿಯಿತು. ಸಂಶಯ ಶಾಶ್ವತವಾಗಿ ಪರಿಹಾರವಾಯಿತು.

ಅಷ್ಟಾವಕ್ರ ಜನಕನಿಗೆ ಹೇಳಿದ್ದು - 'ನೀನು ರಾಜನೂ ಅಲ್ಲ. ಭಿಕ್ಷುಕನೂ ಅಲ್ಲ. ನೀನು ಪರಮಾತ್ಮನೇ ಆದ ಜೀವಾತ್ಮ. ಇದರ ಬಗ್ಗೆ ಸಂದೇಹ ಬೇಡ!'

ಅಷ್ಟಾವಕ್ರಗೀತಾ ಎಂಬ ಆಧ್ಯಾತ್ಮಿಕ ಗ್ರಂಥದಲ್ಲಿ ಬರುವ ಕಥೆಯಿದು. ಅಷ್ಟಾವಕ್ರ ಎಂಬ ತರುಣ ಸನ್ಯಾಸಿ ಜನಕನ ಆಸ್ಥಾನಕ್ಕೆ ಬರುತ್ತಾನೆ. ದೇಹದ ಎಂಟು ಭಾಗಗಳಲ್ಲಿ ಸಿಕ್ಕಾಪಟ್ಟೆ ಯದ್ವಾತದ್ವಾ ವಕ್ರವಕ್ರವಾಗಿರುತ್ತಾನೆ. ವಾಕಡಾ ನಡೆಯುತ್ತಾ ಆಸ್ಥಾನ ಪ್ರವೇಶಿಸುವ ಅಷ್ಟಾವಕ್ರನನ್ನು ನೋಡಿ ಎಲ್ಲರಿಗೂ ನಗೆ ಬರುತ್ತದೆ. ಅಪಹಾಸ್ಯ ಮಾಡುತ್ತಾರೆ. ಅವರ ಅಪಹಾಸ್ಯಕ್ಕೆ ಒಂದು ಖಡಕ್ ಉತ್ತರ ಕೊಡುವದರೊಂದಿಗೆ ಅಷ್ಟಾವಕ್ರಗೀತಾ ಆರಂಭವಾಗುತ್ತದೆ. ಸ್ವತಃ ದೊಡ್ಡ ಜ್ಞಾನಿಯಾಗಿದ್ದ ಜನಕ ಮಹಾರಾಜ ಅಷ್ಟಾವಕ್ರನ ಪಾಂಡಿತ್ಯವನ್ನು ಬಹುಬೇಗ ಗ್ರಹಿಸುತ್ತಾನೆ. ತನ್ನ ಸಂದೇಹಗಳನ್ನು ಒಂದಾದಮೇಲೊಂದರಂತೆ ಬಗೆಹರಿಸಿಕೊಳ್ಳತೊಡಗುತ್ತಾನೆ.

ಅದ್ವೈತ ವೇದಾಂತದ ತತ್ವಗಳನ್ನು ಪ್ರಖರವಾಗಿ ಪ್ರತಿಪಾದಿಸುವ ಮಹಾನ್ ಗ್ರಂಥಗಳಲ್ಲಿ ಅಷ್ಟಾವಕ್ರಗೀತಾಕ್ಕೆ ದೊಡ್ಡ ಸ್ಥಾನವಿದೆ.

ಸ್ವಾಮಿ ಚಿನ್ಮಯಾನಂದರು, ಶ್ರೀ ಶ್ರೀ ರವಿ ಶಂಕರರು ಮತ್ತೂ ಅನೇಕರು ಈ ಅದ್ಭುತ ಗ್ರಂಥವನ್ನು ಇಂಗ್ಲೀಷು  ಮತ್ತಿತರ ಭಾಷೆಗಳಿಗೆ ತಂದಿದ್ದಾರೆ.

**

ರಾತ್ರಿ ಕಣ್ಣು ಮುಚ್ಚಿಕೊಂಡಾಗ ನೋಡುವದು ಕನಸು. ಹಗಲಿನಲ್ಲಿ ಕಣ್ಣು ಬಿಟ್ಟುಕೊಂಡು ನೋಡುವದು ಕೂಡ ಕನಸೇ. ಅಷ್ಟೇ ಅದಕ್ಕೆ ಜೀವನ, ಜಗತ್ತು ಅಂತೆಲ್ಲ ಲೇಬಲ್ ಅಂಟಿಸಿ ಇಲ್ಲದ ಮಹತ್ವ ಕೊಟ್ಟಿದ್ದೇವೆ. ವಿಶ್ಲೇಷಿಸಿ ನೋಡಿದರೆ ಸ್ವಪ್ನಾವಸ್ಥೆಗೂ, ಜಾಗ್ರತಾವಸ್ಥೆಗೂ ವ್ಯತ್ಯಾಸವಿಲ್ಲ. ರಾತ್ರಿಯ ಕನಸು ವೈಯಕ್ತಿಕ. ಹಗಲಿನ ಕನಸು ಸಾರ್ವತ್ರಿಕ ಅಷ್ಟೇ. ರಾತ್ರಿಯ ಕನಸು ನಮ್ಮ ಮನಸ್ಸಿನ ಸೃಷ್ಟಿ. ಜೀವನವೆಂಬ ಕನಸು ಕೂಡ ನಮ್ಮ ಸೃಷ್ಟಿಯೇ. ಈಶ್ವರ ಸೃಷ್ಟಿ. #ಮಾಯಾ

**

Tuesday, October 03, 2017

ಯೋಗದ ಪ್ರಭಾವ

ಒಬ್ಬರ ಮಗನಿಗೆ ಉಗುರು ಕಚ್ಚುವ ಕೆಟ್ಟ ಅಭ್ಯಾಸ. ಏನೇ ಚಿಕಿತ್ಸೆ, counseling ಮಾಡಿದರೂ ಉಪಯೋಗವಾಗಲಿಲ್ಲ. ಯಾರೋ ಪರಿಚಿತರು ಹೇಳಿದರು, 'ಯೋಗಾಭ್ಯಾಸ ಕಲಿಸಿ. ಅದರಿಂದ ಈ ಕೆಟ್ಟ ಅಭ್ಯಾಸ ಬಿಟ್ಟರೂ ಬಿಡಬಹುದು.'

ಅದೂ ಒಂದು ಆಗಿಹೋಗಲಿ ಅಂತ ಆ ಹುಡುಗನನ್ನು ಯೋಗದ ಕ್ಲಾಸಿಗೆ ಸೇರಿಸಿದರು.

ಕೆಲಕಾಲದ ಮೊದಲು ಸಿಕ್ಕಿದ್ದ ಪರಿಚಿತರು ಮತ್ತೆ ಭೇಟಿಯಾದರು.

'ನಿಮ್ಮ ಮಗನನ್ನು ಯೋಗಾಭ್ಯಾಸಕ್ಕೆ ಕ್ಲಾಸಿಗೆ ಹಾಕಿದಿರೇ?' ಎಂದು ಕೇಳಿದರು.

'ಹೌದು. ಈಗ ಚೆನ್ನಾಗಿ ಯೋಗಾಸನಗಳನ್ನು ಹಾಕುತ್ತಾನೆ,' ಎಂದರು ಹುಡುಗನ ಪಾಲಕರು.

'ತುಂಬಾ ಸಂತೋಷ. ಈಗ ಉಗುರು ಕಚ್ಚುವ ಅಭ್ಯಾಸ ಬಿಟ್ಟಿದ್ದಾನೆಯೇ?' ಎಂದು ಕೇಳಿದರು ಪರಿಚಿತರು.

'ಇಲ್ಲ.....' ಎಂದು ಹೇಳಿದರು ಪಾಲಕರು. ತಲೆ ಅಡ್ಡಡ್ಡ ಆಡಿಸಿದರು.

'ಮತ್ತೆ???!!!' ಆಶ್ಚರ್ಯಚಕಿತರಾಗಿ ಕೇಳಿದರು ಪರಿಚಿತರು.

'ಈಗ ಕಾಲ್ಬೆರಳುಗಳ ಉಗುರುಗಳನ್ನೂ ಕೂಡ ಕಚ್ಚುತ್ತಾನೆ!' ಎಂದು ನಿಟ್ಟುಸಿರು ಬಿಟ್ಟರು ಪಾಲಕರು.


ಮೂಲ: ಸ್ವಾಮಿ ಅನುಭವಾನಂದಜೀ

ಕೊಂಚ ಅಪ್ರಸ್ತುತವಾದರೂ ಯಾಕೋ ಈ ಗಾದೆ ಮಾತು ನೆನಪಾಯಿತು - Motivation is not always the answer. If you motivate an idiot, you get a motivated idiot!

Monday, October 02, 2017

Interesting course taught by S. Gurumurthy at IIT-Mumbai

As many of us know, S.Gurumurthy is a multifaceted personality. Trained as a chartered accountant, he has been an investigative journalist exposing black money trail of some major industrial houses back in 1990s, a public speaker, an advisor to governments and companies etc.

At the request of IIT-Mumbi, he conducted a course. 14 lectures of roughly 1 hour each. It also features guest speakers like Prof. R. Vaidyanathan of IIM-Bangalore and Mukul Kanitkar, a Swadesi movement leader.

Very enlightening course which covers economics, politics, history, sociology, demography, future of the world etc.

Very influencing and impressive. I have been watching several speeches by S.Gurumurthy, Prof. Vaidyanathan and Sree Iyer. They bring a very interesting perspective on current events. A very refreshing change from the run-of-the-mill coverage you find in news papers and magazines.

Really made me sit up and take notice about why certain things happen at macro level and what are the underlying causes.

Highly recommended. Takes about 16-18 hours to complete the entire series. Took a week for me at the rate of one lecture/day and a couple/day over the weekend. Great use of time. S.Gurumurthy is a walking encyclopedia and is a great interpreter of data.

Here is the link to the first video in the series. You will find links to others from there.