Sunday, January 18, 2015

ಶ್ರೀಖಂಡ!

ಟೀಚರ್: ಮನಿಗೆ ಹೋಗಿ ನಿಮ್ಮಪ್ಪನ್ನ ಕರ್ಕೊಂಡು ಬಾ. ನಿನ್ನ ಬಗ್ಗೆ ಮಾತಾಡೋದು ಅದ.

ಸ್ಟೂಡೆಂಟ್: ಏ! ಇವತ್ತು ನಮ್ಮ ಅಪ್ಪ ಬರಲಿಕ್ಕೆ ಸಾಧ್ಯನೇ ಇಲ್ಲ ಬಿಡ್ರೀ.

ಟೀಚರ್: ಯಾಕ?? ಊರಾಗ ಇಲ್ಲ??

ಸ್ಟೂಡೆಂಟ್: ಇದ್ದಾರ್ರೀ.

ಟೀಚರ್: ಮತ್ತ??
 

ಸ್ಟೂಡೆಂಟ್: ನಾಳೆ ನಮ್ಮನಿಯೊಳಗ ಹಬ್ಬ ಅದರಿ.
 

ಟೀಚರ್: ಏ! ಹುಚ್ಚ ಮಂಗ್ಯಾನಿಕೆ. ನಾಳೆ ನಿಮ್ಮನಿಯೊಳಗ ಹಬ್ಬ ಇರೋದಕ್ಕೂ ಇವತ್ತು ನಿಮ್ಮಪ್ಪನ್ನ ಸಾಲಿಗೆ ಕರ್ಕೊಂಡು ಬರಲಿಕ್ಕೆ ಆಗದೇ ಇರೋದಕ್ಕೂ ಏನೋ ಸಂಬಂಧ?? ಹಾಂ?? ಕೊಡಲೇನು ಒಂದು??
 

ಸ್ಟೂಡೆಂಟ್: ನಾಳೆ ಹಬ್ಬಕ್ಕ ಶ್ರೀಖಂಡ ಮಾಡಾಕಿದ್ದಾಳರೀ ನಮ್ಮವ್ವ!
 

ಟೀಚರ್: ಅದಕ?? ಏನು??
 

ಸ್ಟೂಡೆಂಟ್: ಶ್ರೀಖಂಡ ಮಾಡಲಿಕ್ಕೆ ಮೊಸರು ನಮ್ಮಪ್ಪಗ ಇರೋ ಒಂದೇ ಒಂದು ಧೋತ್ರದಾಗೇ ಕಟ್ಟಿ, ನೇತು ಹಾಕಿ ಬಿಟ್ಟಾಳರೀ ನಮ್ಮವ್ವ!!!! ಉಟ್ಟುಕೊಂಡು ಬರಲಿಕ್ಕೆ ನಮ್ಮಪ್ಪನ ಕಡೆ ಬ್ಯಾರೆ ಧೋತ್ರ ಇಲ್ಲರೀ!

ಇದನ್ನು ಕೇಳಿದ ಟೀಚರ್ ಎಚ್ಚರ ತಪ್ಪಿ ಬಿದ್ದು, ನಂತರ ಎದ್ದು ಸುಧಾರಿಸಿಕೊಂಡ ನಂತರ ಕೇಳಿದ್ದು ಒಂದೇ ಪ್ರಶ್ನೆ

ಶ್ರೀಖಂಡಕ್ಕ ಮೊಸರು ತೂಗು ಹಾಕೋಕಿಂತ ಮೊದಲು ಧೋತ್ರಾ ಒಗೆದಿದ್ದರಿ (ತೊಳೆದಿದ್ದಿರಿ) ಏನು???

ಸ್ಟೂಡೆಂಟ್: ಗೊತ್ತಿಲ್ಲರೀ!!!!!!

ಟೀಚರ್ ಮತ್ತೊಮ್ಮೆ ಎಚ್ಚರ ತಪ್ಪಿ ಬಿದ್ದವರು ಇನ್ನೂ ಎದ್ದಿಲ್ಲ!

No comments: